Friday, September 20, 2024
ಸುದ್ದಿ

ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ಪೊಲೀಸರ ದಾಳಿ: 6 ಪಿಕಪ್‌ ಸಹಿತ ಮರಳು ವಶ – ಕಹಳೆ ನ್ಯೂಸ್

ಉಪ್ಪಿನಂಗಡಿ:  ಉದನೆಯಿಂದ ಗುಂಡ್ಯದವರೆಗೆ ಹರಿಯುತ್ತಿರುವ ಕೆಂಪುಹೊಳೆ ನದಿಕಿನಾರೆಗಳಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಗಣಿ ಇಲಾಖೆ ಹಾಗೂ ಪೊಲೀಸ್‌ ಉನ್ನತಾಧಿಕಾರಿಗಳಿಗೆ ಸ್ಥಳೀಯರಿಂದ ದೂರು ನೀಡಿದ್ದರು. ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ಪೊಲೀಸರು ದಾಳಿ ನಡೆಸಿದ್ದು, 6 ಪಿಕಪ್‌ ಸಹಿತ ಮರಳವನ್ನು ವಶಪಡಿಸಿಕೊಂಡಿದ್ದಾರೆ.

ಒಂದೆರಡು ವಾರಗಳ ಹಿಂದೆ ಉಪ್ಪಿನಂಗಡಿ ವೃತ್ತ ನಿರೀಕ್ಷಕರು ದಾಳಿಯನ್ನು ನಡೆಸಿದ್ದರಾದರೂ  ಮರಳು ಸಾಗಾಟಗಾರರು ತಪ್ಪಿಸಿಕೊಳ್ಳುವಲ್ಲಿ ಸಫ‌ಲರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಸ್ಕ್ವಾಡ್‌, ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರು, ಉಪ್ಪಿನಂಗಡಿ ಉಪ ನಿರೀಕ್ಷಕರು ಮತ್ತು ನೆಲ್ಯಾಡಿ ಠಾಣೆಯ ಸಿಬ್ಬಂದಿ ಭಾಗವಹಿಸಿದ್ದರು.

ಜಾಹೀರಾತು