
ಮೂಡುಬಿದಿರೆ: ಶಿರ್ತಾಡಿ ಸೇತುವೆ ಬಳಿ ಶುಕ್ರವಾರ ಸಂಜೆ ಕಾರೊಂದು ಆಯಕ್ಟಿವಾಕ್ಕೆ ಢಿಕ್ಕಿ ಹೊಡೆದು ಸವಾರೆ, ಶಿರ್ತಾಡಿ ಹೋಲಿ ಏಂಜೆಲ್ಸ್ ಶಾಲೆಯ ಶಿಕ್ಷಕಿ, ಮೂಡುಬಿದಿರೆ ನಾಗರಕಟ್ಟೆ ನಿವಾಸಿ ಸುಜಯಾ ಭಂಡಾರಿ ಸಾವನ್ನಪ್ಪಿದ್ದಾರೆ.
ಗಂಭೀರ ಗಾಯಗೊಂಡಿದ್ದ ಸುಜಯಾ ಅವರನ್ನು ಮಂಗಳೂರು ಆಸ್ಪತ್ತೆಗೆ ಸಾಗಿಸಲಾಯಿತಾದರೂ ಅಲ್ಲಿ ಮೃತಪಟ್ಟರು.
ಅವರಿಗೆ ಅವಳಿ ಮಕ್ಕಳಿದ್ದು, ಪತಿ ವಿದೇಶದಲ್ಲಿದ್ದಾರೆ.