
ಕೊಳ್ಳೇಗಾಲ: ಹೈ ಟೆನ್ಷನ್ ವಿದ್ಯುತ್ ಟವರ್ ಕಂಬ ಏರಿ ಯುವಕನೋರ್ವ ತಾಯಿ ಎದುರೇ ಪ್ರಾಣ ಬಿಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಬಳಿ ನೆಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿ ಮೃತ ಯುವಕ.
ಮಂಗಳವಾರ ( ಮಾರ್ಚ್ 18 ) ಬೆಳ್ಳಗ್ಗೆ 8ರ ವೇಳೆ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಕಂಡ ಸ್ಥಳೀಯರು ಇಳಿಯುವಂತೆ ಒತ್ತಾಯ ಮಾಡಿದ್ದಾರೆ ಅಲ್ಲದೆ ಈ ವೇಳೆ ತಾಯಿಯೂ ಕೂಡ ಇಳಿಯುವಂತೆ ಹೇಳಿದಾಗ ನಂತರ ಟವರ್ ನಲ್ಲಿ ವಿದ್ಯುತ್ ವೈರ್ ಗೆ ಹಿಡಿದು ಪ್ರಾಣ ಬಿಟ್ಟಿದ್ದಾನೆ.
ಇನ್ನು ಯುವಕ ಆತ್ಮಹತ್ಯೆಗೀಡಾದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.