ಎ.14ರ ಅಂಬೇಡ್ಕರ್ ಜಯಂತಿಗೆ ಸಾರ್ವಜನಿಕ ರಜೆ: ಕೇಂದ್ರ ಸರಕಾರ ಘೋಷಣೆ-ಕಹಳೆ ನ್ಯೂಸ್

ಹೊಸದಿಲ್ಲಿ: ಡಾ|ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಎ.14ನ್ನು ಸಾರ್ವಜನಿಕ ರಜಾದಿನವೆಂದು ಕೇಂದ್ರ ಸರಕಾರ ಶುಕ್ರವಾರ ಘೋಷಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, “ಸಂವಿಧಾನ ಶಿಲ್ಪಿ, ಸಮಾಜದಲ್ಲಿ ಸಮಾನತೆ ಯುಗವನ್ನು ಸ್ಥಾಪಿಸಿದ ಬಾಬಾ ಸಾಹೇಬ್ ಡಾ| ಅಂಬೇಡ್ಕರ್ ಅವರ ಜನ್ಮದಿನವು ಇನ್ನು ಮುಂದೆ ಸಾರ್ವಜನಿಕ ರಜಾದಿನವಾಗಲಿದೆ ಎಂದಿದ್ದಾರೆ.
ಅಲ್ಲದೆ ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಾಬಾ ಸಾಹೇಬರ ಅನುಯಾಯಿಯಾದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರ ಹೊಂದಿರುವ ಭಾವನೆಗಳನ್ನು ಗೌರವಿಸಿದ್ದಾರೆ ಎಂದಿದ್ದಾರೆ.