Friday, September 20, 2024
ಸುದ್ದಿ

ದರ್ಪಣ ತೀರ್ಥಕ್ಕೆಂದು ಹೋದ ವ್ಯಕ್ತಿ ದುರ್ಮರಣ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ದರ್ಪಣ ತೀರ್ಥ ಮಾಡಲೆಂದು ಹೋದ ವ್ಯಕ್ತಿಯು ಮೃತಪಟ್ಟಿರೋ ಘಟನೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಸೇತುವೆಯ ಕೆಳಗೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಆದಿ ಸುಬ್ರಮಣ್ಯದ ಹೋಟೆಲೊಂದರಲ್ಲಿ ಕೆಲಸ ಮಾಡುತಿದ್ದ ವ್ಯಕ್ತಿ ವಿರೇಶ್ ಎಂದು ಶಂಕಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಅಡಲಗಿ ತಾಲೂಕಿನ ವಿರೇಶ್ ನಿನ್ನೆ ಮದ್ಯಾಹ್ನ ಸುಮಾರು 1.45ರ ವೇಳೆಗೆ ನದಿ ತೀರ್ಥ ಸ್ನಾನ ಮಾಡೆಲೆಂದು ಹೋದಾಗ ಈ ಘಟನೆ ನಡೆದಿದೆ. ಮೃತ ಪಟ್ಟ ಬಗ್ಗೆ ನಿಖರ ಮಾಹಿತಿ ಮರಣೋತ್ತರ ಪರೀಕ್ಷೆ ಹಾಗು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ. ಮೃತದೇಹವನ್ನು ಸುಬ್ರಮಣ್ಯ ಪ್ರಾಥಮಿಕ ಅರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು