Friday, September 20, 2024
ರಾಜಕೀಯ

ಸಿದ್ದು ವರ್ಸಸ್ ಡಿವಿಎಸ್ ಟ್ವೀಟ್ ವಾರ್ – ಕಹಳೆ ನ್ಯೂಸ್

ಕೈ ಕಮಲ ನಾಯಕರ ನಡುವೆ ಟ್ವಿಟ್ಟರ್‍ನಲ್ಲಿ ಟ್ವೀಟ್ ವಾರ್ ಆಗ್ತಾನೇ ಇದೆ. ನಾಡಿನ ಮಾಜಿ ಸಿ ಎಂ ಸಿದ್ದರಾಮಯ್ಯ ಮಂಗಳೂರಿಗೆ ಅಮಿತ್ ಶಾ ಭೇಟಿ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಕಿಡಿ ಕಾರಿದ್ದಾರೆ. ‘ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕರ್ನಾಟಕದಲ್ಲೇ ಬಂದು ಮನೆ ಮಾಡಿದ್ರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನ ಬೆಂಬಲ ನೀಡುವುದಿಲ್ಲ’ ಎಂದಿದ್ದಾರೆ.
ಇದಕ್ಕೆ ಪ್ರತ್ಯುತ್ತರವಾಗಿ ಕೇಂದ್ರ ಸಚಿವ ಡಿ ವಿ ಎಸ್ ಟ್ವೀಟ್ ಮಾಡಿದ್ದಾರೆ. ಇನ್ನು ‘ಅದೇನೂ ಮನೆ ಮಾಡಿದ್ರೂ ಅಂದ್ರಲ್ಲ. ನೀವು ಚಾಮುಂಡೇಶ್ವರಿ ಬಿಟ್ಟು ಬಾದಾಮಿಯಲ್ಲಿ ಮನೆ ಮಾಡಿಲ್ವಾ? ಯಾರಾದ್ರೂ ಪ್ರಶ್ನೆ ಮಾಡಿದ್ರಾ? ಕರ್ನಾಟಕದ ಗುತ್ತಿಗೆ ಇನ್ನೂ ಕೂಡ ಮತದಾರರ ಕೈಯಲ್ಲೇ ಇದೆ. ಅದು ನಿಮ್ಮ ಮೈತ್ರಿ ಸರ್ಕಾರಕ್ಕೆ ಯಾರೂ ಬರೆದು ಕೊಟ್ಟಿಲ್ಲ. ಚುನಾವಣೆಯನ್ನು ಎದುರಿಸೋಣ. ಆನತಾ ನ್ಯಾಯಾಲಯವೇ ದೊಡ್ಡ ಪ್ರಯೋಗ ಶಾಲೆ’ ಎಂದು ಸಿದ್ದುಗೆ ತಿರುಗೇಟು ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು