Friday, September 20, 2024
ಸುದ್ದಿ

ಕೇರಳ ಪೊಲೀಸರ ಅತಿರೇಕದ ವರ್ತನೆಯನ್ನು ಖಂಡಿಸುತ್ತೇವೆ: ವಿ.ಹಿಂ.ಪ, ಬಜರಂಗದಳ – ಕಹಳೆ ನ್ಯೂಸ್

ಶಬರಿಮಲೆಯಲ್ಲಿ ಕೇರಳ ಪೊಲೀಸರು ನಡೆಸಿದ ಅತಿರೇಕದ ವರ್ತನೆಯನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ.

ಮಹಿಳೆಯರು ಶಬರಿಮಲೆಗೆ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಏನು ತೀರ್ಪು ನೀಡಿದೆ, ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರಕಾರ ತೀರ್ಪನ್ನು ಆದಷ್ಟು ಬೇಗ ಅನುಷ್ಠಾನ ಮಾಡುವಲ್ಲಿ ತುದಿಗಾಲಲ್ಲಿ ನಿಂತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ ಕ್ರೈಸ್ತ ಮಿಷನರಿಗಳ ಜೊತೆ ಸೇರಿಕೊಂಡು ಹಿಂದೂ ಭಾವನೆಗಳನ್ನ ದಮನ ಮಾಡುತ್ತಿದ್ದಾರೆ. ಅಯ್ಯಪ್ಪ ಭಕ್ತಾದಿಗಳ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದಾರೆ ಮತ್ತು ದೇವಾಲಯದಲ್ಲಿ ಪೊಲೀಸರಿಗೆ ಚಪ್ಪಲಿ ಶೂ ಹಾಕಿಕೊಂಡು ಇರಿಸಿದ್ದಾರೆ.

ಜಾಹೀರಾತು

ಆದುದರಿಂದ ಪಿನರಾಯಿ ವಿಜಯನ್ ಹಿಂದೂ ವಿರೋಧಿ ಆದುದರಿಂದ ಕೂಡಲೆ ರಾಜೀನಾಮೆ ನೀಡಬೇಕು, ಕೇಂದ್ರ ಸರಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಜಗದೀಶ್ ಶೇಣವ ಆಗ್ರಹಿಸಿದರು.