Friday, September 20, 2024
ಸಿನಿಮಾಸುದ್ದಿ

‘ವಿಕ್ರಾಂತ್’ ತುಳು ಕನ್ನಡ ಚಿತ್ರದ ಶೂಟಿಂಗ್‌ಗೆ ಮುಹೂರ್ತ ಫಿಕ್ಸ್ – ಕಹಳೆ ನ್ಯೂಸ್

ಮಂಗಳೂರು: ರಾಧಾ ಕಂಬೈನ್ಸ್ ಲಾಂಛನದಡಿಯಲ್ಲಿ ರಾಜೇಂದ್ರ ಯಶು ಬೆದ್ರೋಡಿ ಅವರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತಮ್ಮ ಚೊಚ್ಚಲ ತುಳು, ಕನ್ನಡ ಚಲನಚಿತ್ರ ವಿಕ್ರಾಂತ್‌ನ ಮುಹೂರ್ತ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ ದೇವಾಲಯದಲ್ಲಿ ನಡೆಯಿತು.

ವಿಕ್ರಾಂತ್ ಚಲನಚಿತ್ರವನ್ನು ನವೀನ್ ಮಾರ್ಲ ನಿರ್ದೇಶನ ಮಾಡಿದ್ದು, ಎನ್ನಾರ್ ಕೆ ವಿಶ್ವನಾಥ್ ಚಿತ್ರನಿರ್ದೇಶನ ಮತ್ತು ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಾಯಕ ನಟನಾಗಿ ವಿನೋದ್ ಶೆಟ್ಟಿ, ನಾಯಕಿಯಾಗಿ ಶೀತಲ್ ಕಾಣಿಸಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಕಲ್ಲಡ್ಕ ಪ್ರಭಾಕರ್ ಭಟ್ ಉದ್ಘಾಟಿಸಿದ್ರು. ಈ ವೇಳೆ ತಂಡ ಸದಸ್ಯರು ಸೇರಿದಂತೆ ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ ಸಿ ಭಂಡಾರಿ, ನಿರ್ಮಾಪಕ ಮತ್ತು ಚಿತ್ರನಿರ್ದೇಶಕ ಎನ್ನಾರ್ ಕೆ ವಿಶ್ವನಾಥ್, ನಿರ್ಮಾಪಕ ಲಯನ್ ಕಿಶೋರ್ ಡಿ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.

ಜಾಹೀರಾತು

ಈ ವೇಳೆ ಪ್ರಭಾಕರ್ ಭಟ್ ಆರಂಭ ಫಲಕ ಹಿಡಿದು ಚಾಲನೆ ನೀಡಿದರು. ನಂತರ ನಾಯಕ ನಟ-ನಟಿ ಅಭಿನಯಿಸಿದ ಪ್ರಥಮ ದೃಶ್ಯದ ಚಿತ್ರಿಕರಣ ನಡೆಯಿತು.