Friday, September 20, 2024
ಸುದ್ದಿ

ಡಿ. ೮ ರಂದು ಮಾಣಿಯಲ್ಲಿ ಕಂಬಳಕೋರಿ – ಕಹಳೆ ನ್ಯೂಸ್

ಬಂಟ್ವಾಳ: ತಾಲೂಕಿನ ಮಾಣಿ ಗ್ರಾಮದಲ್ಲಿ ಡಿ. ೮ ರಂದು ಮಾಣಿಗುತ್ತುವಿನಲ್ಲಿ ನಡೆಯಲಿರುವ ಕಂಬಳದ ಕೋರಿ ನೇಮಕ್ಕೆ ನಿನ್ನೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ಬಳಿಕ ಗೊನೆ ಕಡಿಯಲಾಯಿತು.
ಕಂಬಳಕೋರಿ ಎಂದರೆ ಗ್ರಾಮದ ಪಾವಿತ್ರ‍್ಯತೆ ಹೊಂದಿರುವ ಕಂಬಳ ಗದ್ದೆಯ ಕೋರುವುದು / ಉಳುಮೆ ಮಾಡುವುದು ಆಗಿದೆ. ಮಾಣಿ ಕಂಬಳ ಗದ್ದೆಗೆ ಸೂತಕ, ಮೈಲಿಗೆ ಇದ್ದವರು ಹೋಗುವಂತಿಲ್ಲ. ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ- ಕಟ್ಟು ನಿಟ್ಟಿನ ನಿಯಮವಾಗಿದೆ.

ಕಂಬಳಕೋರಿಗೆ ನಿಗದಿಗೊಳಿಸಿದ ಏಳು ದಿವಸಗಳ ಮೊದಲು ಮಾಣಿ ಗುತ್ತಿನ ಮನೆಯಲ್ಲಿ ಗೊನೆ ಮುಹೂರ್ತ ನಡೆಯುತ್ತದೆ. ದೈವದ ಅಪ್ಪಣೆ ಪ್ರಕಾರ ಈ ನೇಮಕ್ಕೆ ಗ್ರಾಮಸ್ಥರ ಮನೆ ಮನೆಗೆ ಹೋಗಿ ಆಮಂತ್ರಣ ಕೊರಗಜ್ಜ ದೈವ ನೀಡುತ್ತದೆ. ಈ ದೈವಕ್ಕೆ ಗ್ರಾಮದ ಪ್ರತೀ ಮನೆಯ ಜನರು ಬರಮಾಡಿ ತುಳುನಾಡಿನ ಸಾರ್ವತ್ರಿಕ ಅಕ್ಕಿ ಅಥವಾ ಭತ್ತ, ತೆಂಗಿನ ಕಾಯಿ, ಯಥಾನುಶಕ್ತಿ ಕಾಣಿಕೆ ಮಾನಾದಿಗೆ ನೀಡಿ ಆಶೀರ್ವಾದ ಪಡೆಯುತ್ತಾರೆ. ಕೆಲವು ಮಂದಿ ಅಗೇಲು ಬಡಿಸುವ ಮೂಲಕ ಕೊರಗಜ್ಜನ ಸಂತೃಪ್ತಿ ಪಡಿಸಿ ಧನ್ಯತಾ ಭಾವ ಹೊಂದುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು