Friday, September 20, 2024
ಸುದ್ದಿ

ಹೃದಯಾಘಾತ: ಮಾಣಿ ಸಮೀಪದ ನಿವಾಸಿ ದುಬಾಯಿಯಲ್ಲಿ ಸಾವು – ಕಹಳೆ ನ್ಯೂಸ್

ವಿಟ್ಲ: ಮಾಣಿ ಸಮೀಪದ ಬುಡೋಳಿ ನಿವಾಸಿಯೋರ್ವರು ದುಬಾಯಿಯಲ್ಲಿ ಹೃದಯಾಘಾತದಿಂದ ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಮೃತರನ್ನು ಬಿ.ಖಾಸಿಂ ಹಾಜಿ ಎಂದು ಹೆಸರಿಸಲಾಗಿದೆ. ಇವರು ತಿಂಗಳ ಹಿಂದೆಯಷ್ಟೇ ದುಬಾಯಿಯಲ್ಲಿರುವ ತನ್ನ ಮಗಳ ಮನೆಗೆ ವಿಸಿಟಿಂಗ್ ವೀಸಾದಲ್ಲಿ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಭಾರತೀಯ ಕಾಲಮಾನ 7-00 ಕ್ಕೆ ದುಬಾಯಿ-ಅಲ್ ರಾಶಿದಿಯಾ ದ ಮಗಳ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ದೇಹವನ್ನು ಅಲ್ಲಿನ ಶಾರ್ಜಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಗುರುವಾರ ಮುಂಜಾನೆ 5-30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.

ಜಾಹೀರಾತು

ಸುಲ್ತಾನ್ ಬೀಡಿ ಮಾಲಕ ದಿ.ಹಾಜಿ ಬಿ. ಹುಸೈನ್ ಅವರ ಸಹೋದರರಾಗಿರುವ ಇವರು ಮಾಣಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.