Friday, September 20, 2024
ಸುದ್ದಿ

ಗಾಂಜಾ ಅಮಲು ಪದಾರ್ಥ ಸೇವಿಸುತ್ತಿದ್ದ ಇಬ್ಬರು ವ್ಯಸನಿಗಳ ಬಂಧನ – ಕಹಳೆ ನ್ಯೂಸ್

ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯ ತೋಟ ಬೆಂಗ್ರೆ ಫುಟ್ ಬಾಲ್ ಗ್ರೌಂಡ್ ಬಳಿ ಗಾಂಜಾ ಅಮಲು ಪದಾರ್ಥವನ್ನು ಸೇವಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸ್ ಉಪನಿರೀಕ್ಷಕರಾದ ಉಮೇಶ್ ಕುಮಾರ್ ಎಮ್.ಎನ್ ಪಣಂಬೂರು ಠಾಣೆ ಹಾಗೂ ಸಿಬ್ಬಂದಿಗಳು ದಸ್ತಗಿರಿ ಮಾಡಿ ಪಣಂಬೂರು ಠಾಣೆಯಲ್ಲಿ ಅಕ್ರ 187/2018 ಕಲಂ:27(ಬಿ) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಆರೋಪಿಗಳು:
ದಾವೂದ್ @ ಸಿದ್ದೀಕ್ ( 33) , ತಂದೆ: ಹಸನಬ್ಬ, ವಾಸ: ಮನೆ ನಂಬ್ರ 5-29 ಎ ಮೊಯಿದ್ದಿನ್ ಜುಮ್ಮಾ ಮಸೀದಿ ತಣ್ಣೀರುಬಾವಿ ವೈ ಎಸ್ ಸಿ ಟಿ ಕ್ಲಬ್ ನ ಹತ್ತಿರ ತಣ್ಣೀರು ಬಾವಿ ಮಂಗಳೂರು

ಜಾಹೀರಾತು
ಜಾಹೀರಾತು
ಜಾಹೀರಾತು

ಅಬ್ದುಲ್ ಕಬೀರ್ (31), ತಂದೆ: ಮೊಹಮ್ಮದ್ ಕಾಸಿಮ್ ,ವಾಸ: ಮನೆ ನಂಬ್ರ ಎಮ್ ಜೆ ಎಮ್ 602 ಕಬೀರ್ ಮಂಜಿಲ್ ಎಸ್ ಎಸ್ ಎಫ್ ಆಫಿಸ್ ಮುಂಭಾಗ ಕಸಬ ಬೇಂಗ್ರೆ ಮಂಗಳೂರು

ಜಾಹೀರಾತು

ಪತ್ತೆ ಕಾರ್ಯ:
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಮಾನ್ಯ ಪೊಲೀಸು ಆಯುಕ್ತರಾದ ಶ್ರೀ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು (ಕಾ & ಸು) ಶ್ರೀ ಹನುಮಂತರಾಯ, ಪೊಲೀಸ್ ಉಪ-ಆಯುಕ್ತರು(ಅಪರಾಧ & ಸಂಚಾರ) ಶ್ರೀಮತಿ ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಎಂ.ಮಂಜುನಾಥ ಶೆಟ್ಟಿ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪಿ.ಎಸ್.ಐ(ಕಾ.ಸು) ಶ್ರೀಉಮೇಶ್ ಕುಮಾರ್.ಎಂ.ಎನ್ ಹಾಗೂ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.