Friday, September 20, 2024
ಸುದ್ದಿ

ಎನ್​ಡಿಎ ಮೈತ್ರಿಕೂಟ ತೊರೆಯುವ ನಿರ್ಧಾರ ಕೈಗೊಂಡ ಉಪೇಂದ್ರ ಕುಶ್ವಾಹ – ಕಹಳೆ ನ್ಯೂಸ್

ನವದೆಹಲಿ: ಬಹುಸಮಯದಿಂದ ನಡೆಯುತ್ತಿದ್ದ  ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಸೀಟು ಹಂಚಿಕೆ ವಿಚಾರವಾಗಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಎನ್​ಡಿಎ ಮೈತ್ರಿಕೂಟ ತೊರೆಯುವ ನಿರ್ಧಾರ ಮಾಡಿದ್ದಾರೆ. ಮೂಲಗಳ ಪ್ರಕಾರ ಉಪೇಂದ್ರ ಕುಶ್ವಾಹ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಆಂಧ್ರ ಪ್ರದೇಶಕ್ಕೆ ವಿಶೇಷ ಸವಲತ್ತು ನೀಡದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಎನ್​ಡಿಯ ಕೂಟ ತೊರೆದಿದ್ದರು. ಅದಾದ ನಂತರ ಎರಡನೆಯವರಾಗಿ ಕುಶ್ವಾಹ ಹೊರನಡೆದಿದ್ದಾರೆ.

ಈ ಸಂಬಂಧ ಇಂದು ಮಧ್ಯಾಹ್ನ ದೆಹಲಿಯಲ್ಲಿ ರಾಷ್ಟ್ರೀಯ ಲೋಕ ಶಕ್ತಿ ಪಕ್ಷದ (ಆರ್​ಎಲ್​ಎಸ್​ಪಿ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಲೋಕಸಭಾ ಅಧಿವೇಶನಕ್ಕೆ ಇನ್ನೊಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಇಂದು ಸಂಜೆ ಎನ್​ಡಿಎ ತನ್ನ ಮಿತ್ರಪಕ್ಷಗಳ ಸಭೆ ಆಯೋಜನೆ ಮಾಡಿದ್ದು, ಈ ಸಭೆಗೆ ಉಪೇಂದ್ರ ಗೈರಾಗುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಬಿಜೆಪಿ ಮತ್ತು ಜೆಡಿ (ಯು) ಎರಡು ಪಕ್ಷಗಳು ತಲಾ 17 ಕ್ಷೇತ್ರಗಳಿಂದ ಸ್ರ‍್ಧೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿರುವುದು ಕುಶ್ವಾಹ ಅವರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಜಾಹೀರಾತು

ತಾತ್ಕಾಲಿಕವಾಗಿ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ ಆರ್​ಎಲ್​ಎಸ್​ಪಿಗೆ ಎರಡು ಸ್ಥಾನಗಳನ್ನು ನೀಡಲಾಗಿದೆ. ಇದು 2014ರಲ್ಲಿ ಆರ್​ಎಲ್​ಎಸ್​ಪಿ ಗೆದ್ದ ಸಂಖ್ಯೆಗಿಂತ ಒಂದು ಸ್ಥಾನ ಕಡಿಮೆಯೇ ಇದೆ. ಕುಶ್ವಾಹ ಅವರು ಕಾರಕತ್​ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ. ಇದೇ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅರುಣ್​ ಕುಮಾರ್ ಅವರನ್ನು ಕಳೆದ ಎರಡು ರ‍್ಷಗಳ ಹಿಂದೆ ಪಕ್ಷದಿಂದ ಅಮಾನತು ಮಾಡಲಾಗಿದೆ.

ಆರ್​ಎಲ್​ಎಸ್​ಪಿ ಎನ್​ಡಿಎ ಮೈತ್ರಿಕೂಟ ತೊರೆದು ವಿರೋಧ ಪಕ್ಷಗಳ ಕೂಟ ಸೇರುವ ಸಾಧ್ಯತೆ ಇದೆ. ಲಾಲುಪ್ರಸಾದ್​ ಯಾದವ್​ ಅವರ ಆರ್​ಜೆಡಿ ಮತ್ತು ಕಾಂಗ್ರೆಸ್​ ಸೇರಲಿದ್ದಾರೆ ಎನ್ನಲಾಗುತ್ತಿದೆ.​