Friday, September 20, 2024
ಸುದ್ದಿ

ಪೂಜಾರಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಕಠಿಣ ಕಾನೂನು ಕ್ರಮ ಕೈಗೊಳ್ಳಲು ಬಿಲ್ಲವ ಸಮಾಜ ಸೇವಾ ಸಂಘದಿಂದ ಒತ್ತಾಯ – ಕಹಳೆ ನ್ಯೂಸ್

ಬಂಟ್ವಾಳ: ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಮಾಜ ಘಾತುಕ ವ್ಯಕ್ತಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಬಂಟ್ವಾಳ ‌ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ) ದ ವತಿಯಿಂದ ಬಂಟ್ವಾಳ ಎ.ಎಸ್.ಪಿ.ಹಾಗೂ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ನೀಡಿದರು.

ಬಿಲ್ಲವ ಸಮಾಜದ ಪ್ರಮುಖ ಮಾರ್ಗದರ್ಶಕ ಜನಾರ್ದನ ಪೂಜಾರಿ ಅವರ ಬಗ್ಗೆ ಅಬ್ದುಲ್ ಹಕೀಂ ಪುತ್ತೂರು ಎಂಬ ಸಮಾಜ ಘಾತುಕ ವ್ಯಕ್ತಿ ಅವಹೇಳನಕಾರಿ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿರುವುದು ಪೂಜಾರಿ ಘನತೆಗೆ ದಕ್ಕೆ ತಂದಿದೆ.‌

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಹಾಗಾಗಿ ಅತನ‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡಿದೆ.‌ ಪೂಜಾರಿ ಅವರು ಬಡವರಿಗೆ ಸದಾ ಪ್ರೇರಣೆ ಯಾದವರು ಅಂತವರ ವಿರುದ್ದ ಹೇಳಿಕೆ ಖಂಡನೀಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ