Friday, September 20, 2024
ಸುದ್ದಿ

ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಸ್ಥಾಪಕರ ದಿನಾಚರಣೆ – ಕಹಳೆ ನ್ಯೂಸ್

ಅಡ್ಯನಡ್ಕ: ನಾವು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಆರ‍್ಶವನ್ನು ಕಂಡುಕೊಳ್ಳಬೇಕು. ದಿವಂಗತ ವಾರಣಾಶಿ ಸುಬ್ರಾಯ ಭಟ್ ಹಾಗೂ ಸಾಯ ಕೃಷ್ಣ ಭಟ್ ಅವರು ಭಾರತೀಯ ಕೌಟುಂಬಿಕ ಮೌಲ್ಯ ಮತ್ತು ಸಹಕಾರಿ ತತ್ತ್ವಗಳೊಂದಿಗೆ ಆರ‍್ಶದಿಂದ ಬದುಕಿ ಜನಮನದಲ್ಲಿ ಸ್ಥಾಯಿಯಾಗಿ ನಿಂತರು ಎಂದು ಖ್ಯಾತ ಚಿಂತಕ ಮತ್ತು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು.

ಅವರು ಡಿ.೧೧ರಂದು ಅಡ್ಯನಡ್ಕದಲ್ಲಿ ಜರುಗಿದ ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಮಿಷಕ್ಕಾಗಿ ನಾವು ಏನನ್ನೂ ಮಾಡಬಾರದು. ಸ್ವಪ್ರಜ್ಞೆಯಿಂದ ಕರ‍್ಯಸಾಧನೆ ಮಾಡಬೇಕು. ವಿಕಾಸದ ಸಾಧನ ಜ್ಞಾನವೇ ಆಗಿದೆ ಎಂದು ಅವರು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿದ್ದರು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮರ‍್ತಿ ಪ್ರಸ್ತಾವಿಸಿದರು. ಜನತಾ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರ್ ಹಾಗೂ ಜನತಾ ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯ ಮಾಧವ ನಾಯ್ಕ್ ಉಪಸ್ಥಿತರಿದ್ದರು.
ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ವರದಿ ವಾಚಿಸಿದರು.

ಜಾಹೀರಾತು

ಜನತಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಸ್ವಾಗತಿಸಿ, ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಮಹಾಬಲ ಶೆಟ್ಟಿ ವಂದಿಸಿದರು. ಅಧ್ಯಾಪಕ ವೃಂದದ ಸುಗುಣ, ಮುನೀರ್ ಕೆ., ಸುಂದರ್ ಜಿ., ಗೀತಾ ಎಚ್. ಶೆಟ್ಟಿ, ಕುಸುಮಾವತಿ, ಸೋಮಶೇಖರ್ ಮತ್ತು ಗಣೇಶಮರ‍್ತಿ ಬಹುಮಾನ ವಿಜೇತರ ವಿವರ ವಾಚಿಸಿದರು.

ಅಡ್ಯನಡ್ಕ, ಮೂಡಂಬೈಲು, ಸಾಯ ಮತ್ತು ಪರ‍್ಲ ಶಾಲೆಗಳ ರ‍್ಹ ವಿದ್ಯರ‍್ಥಿಗಳಿಗೆ ವಿದ್ಯರ‍್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ವರ‍್ಷಿಕೋತ್ಸವದ ಸ್ರ‍್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಹಿರಿಯ ವಿದ್ಯರ‍್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದದೀಕ್ಷಾ ಪಿ. ಎಸ್. ಹಾಗೂ ಪಂಚಮಿಕುಮಾರಿ ಕರ‍್ಯಕ್ರಮ ನಿರೂಪಿಸಿದರು.

ಪರ‍್ವಾಹ್ನ ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಧ್ವಜಾರೋಹಣ ನೆರವೇರಿಸಿದರು. ದಿವಂಗತ ಪರ‍್ವತಿ ಅಮ್ಮ ಅವರ ಸ್ಮರಣರ‍್ಥ ಮಗ ನಾರಾಯಣ ಜೋಶಿ ಚರ‍್ಕಾಡು ಅವರಿಂದ ಸಿಹಿತಿಂಡಿ ವಿತರಣೆ ಜರುಗಿತು.

ಅಪರಾಹ್ನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಜರುಗಿದ ಹಿರಿಯ ವಿದ್ಯರ‍್ಥಿ ಸಂಘದ ಸಭಾ ಕರ‍್ಯಕ್ರಮದಲ್ಲಿ ಹಿರಿಯ ವಿದ್ಯರ‍್ಥಿ ಸಂಘದ ಅಧ್ಯಕ್ಷ ಜಯಾನಂದ ಉಳಯ, ಕರ‍್ಯರ‍್ಶಿ ಎಂ.ಕುಂಞ ನಾಯ್ಕ್ ಉಪಸ್ಥಿತರಿದ್ದರು. ಹಿರಿಯ ವಿದ್ಯರ‍್ಥಿಗಳಿಂದ ನಡೆದ ಮನರಂಜನಾ ಕರ‍್ಯಕ್ರಮದಲ್ಲಿ ನೃತ್ಯ ಪ್ರರ‍್ಶನ ಮತ್ತು ರಾಜಶೇಖರ್ ಮರಕಿಣಿ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಜರುಗಿತು. ನಿವೃತ್ತ ಅಧ್ಯಾಪಕ ಟಿ. ಕೃಷ್ಣ ಭಟ್ ಕರ‍್ಯಕ್ರಮ ನಿರೂಪಿಸಿದರು.