Friday, September 20, 2024
ಸುದ್ದಿ

ಪರಂಗಿಪೇಟೆಯ ವಿವಾದಿತ ಮೀನು ಮಾರ್ಕೆಟ್ ಸ್ಥಳಕ್ಕೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಭೇಟಿ – ಕಹಳೆ ನ್ಯೂಸ್

ಬಂಟ್ವಾಳ: ವಿವಾದಿತ ಪರಂಗಿಪೇಟೆ ಮೀನಿನ ಮಾರ್ಕೆಟ್ ಸ್ಥಳಕ್ಕೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.ರೈಲ್ವೆ ಇಲಾಖೆಯವರ ಜಮೀನು ಅತಿಕ್ರಮಿಸಿ ಈ ಪ್ರದೇಶದಲ್ಲಿ ಮೀನಿನ ಮಾರ್ಕೆಟ್, ತರಕಾರಿ, ಹಣ್ಣು ಹಂಪಲು ಅಂಗಡಿಗಳನ್ನು ಮಾಡಿದ್ದಾರೆ ಎಂಬುದು ರೈಲ್ವೆ ಇಲಾಖೆಯ ಆರೋಪ. ಈ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಬೇಕೆಂಬುವುದು ರೈಲ್ವೇ ಇಲಾಖೆಯ ಒತ್ತಾಯವಾಗಿದೆ. ಈ ಬಗ್ಗೆ 2016 ರಲ್ಲಿ ಅಂಗಡಿಗಳ ಮಾಲಕರಿಗೆ ನೋಟೀಸ್ ಜಾರಿ ಮಾಡಿದ್ದರು. ಅ ನಂತರ ನಿರಂತರವಾಗಿ ನೋಟೀಸ್ ನೀಡುತ್ತಾ ಬಂದಿರುವ ಇಲಾಖೆ ಕಳೆದ ವಾರ ಅಂತಿಮ ನೋಟೀಸ್ ಜಾರಿ ರೈಲ್ವೆ ಇಲಾಖೆಯ ಪೊಲೀಸ್ ಸಹಿತ ಡ್ರೋನ್ ಕ್ಯಾಮರಾ ಅಳವಡಿಸಿ ತೆರವು ಕಾರ್ಯಚರಣೆಗೆ ಮುಂದಾಗಿತ್ತು. ಆದರೆ ಸ್ಥಳೀಯ ಹಾಗೂ ಅಂಗಡಿ ಮಾಲೀಕರ ವಿರೋಧದ ಹಿನ್ನೆಲೆಯಲ್ಲಿ ಮಾತುಕತೆಯನ್ನು ನಡೆಸಿದ ಇಲಾಖೆ ಜ.15 ರವರೆಗೆ ಕಾಲಾವಕಾಶ ನೀಡಿತ್ತು. ಅದರೊಳಗೆ ಅಂಗಡಿಗಳನ್ನು ತೆರವುಗೊಳಿಸಲು ನೋಟೀಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮೀನು ಮಾರ್ಕೆಟ್ ಹಾಗೂ ಇತರ ಅಂಗಡಿ ಮಾಲಕರಿಗೆ ಅಲ್ಲೇ ಸಮೀಪದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲು ಸ್ಥಳ ಗುರುತಿಸಿ ಬಳಿಕ ಗ್ರಾಮ ಪಂಚಾಯತ್ ಇವರಿಗೆ ಬದಲಿ ವ್ಯವಸ್ಥೆ ಶೀಘ್ರವಾಗಿ ಕಲ್ಪಿಸಿಕೊಡಲು ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅದ್ಯಕ್ಷ ರಮ್ಲಾನ್ ಪುದು, ಪ್ರಮುಖರಾದ ಫಾರೂಕ್ ಪರಂಗಿಪೇಟೆ, ಹಾಶೀರ್ ಪೇರಿಮಾರ್, ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು