Recent Posts

Saturday, September 21, 2024
ಸುದ್ದಿ

ಇಂದು ಕಜೆ ಈಶ್ವರ ಭಟ್ ಗೆ ಶ್ರೇಣಿ ಶತಮಾನೋತ್ಸವ ಪ್ರಶಸ್ತಿ | ಶ್ರೇಣಿ ಸಂಸ್ಕರಣೆ, ತಾಳಮದ್ದಳೆ.

ಉಪ್ಪಿನಂಗಡಿ : ಶ್ರೇಣಿ ಗೋಪಾಲಕೃಷ್ಣ ಭಟ್ ಚ್ಯಾರಿಟೇಬಲ್ ಟ್ರಸ್ಟ್ ರಿ. ಸುರತ್ಕಲ್ ಇವರ ಆಶ್ರಯದಲ್ಲಿ ಶ್ರೇಣಿ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಉಪ್ಪಿನಂಗಡಿಯ ಕಾಳಿಕಾಂಬಾ ಕಲಾಸೇವಾ ಸಂಘ ಮತ್ತು ಯಕ್ಚಸಂಗಮ ಉಪ್ಪಿನಂಗಡಿ ಇವುಗಳ ಜಂಟಿ ಸಹಯೋಗದೊಂದಿಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇಂದು ಶನಿವಾರ ಸಂಜೆ ಗಂಟೆ ೪.೦೦ ರಿಂದ ಶ್ರೇಣಿ ಸಂಸ್ಕರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರು, ಅಪ್ರತಿಮ ಯಕ್ಷಗಾನ ಸಂಘಟಕರಾದ ಕಜೆ ಈಶ್ವರ ಭಟ್ ಅವರಿಗೆ ಶ್ರೇಣಿ ಶತಮಾನೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಘುನಾಥ ರೈ ಎ. ವಹಿಸಲಿದ್ದಾರೆ. ಶ್ರೇಣಿ ಸಂಸ್ಮರಣಾ ಭಾಷಣವನ್ನು ಖ್ಯಾತ ಅರ್ಥದಾರಿ ಗಣರಾಜ ಕುಂಬ್ಳೆ ಮಾಡಲಿದ್ದಾರೆ. ಅಭಿನಂದನಾ ನುಡಿಯನ್ನು ದಿವಾಕರ್ ಆಚಾರ್ಯ ಗೇರುಕಟ್ಟೆ ಆಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ರಾಜ್ಯ ಪ್ರಶಸ್ತಿ ಪುರಸ್ಕತ ಯಕ್ಷಗಾನ ಕಲಾವಿದ ವೆಂಕಟರಮಣ ಭಟ್,ಪಾತಾಳ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಶ್ರೀರಾಮ ನಿರ್ಯಾಣ ನಡೆಯಲಿದೆ.

ಜಾಹೀರಾತು

Leave a Response