Saturday, September 21, 2024
ಸುದ್ದಿ

ಮಂಗಳೂರು ಕಾಂಗ್ರೆಸ್ ಒಡೆದ ಮನೆ, ಸಿ.ಎಂ. ಮುಂದೆಯೇ ಸಾಭೀತು| ಐವಾನ್ ಡಿಸೋಜಾರನ್ನು ತಳ್ಳಿದ ಮಿಥುನ್ ರೈ.

ಮಂಗಳೂರು : ಬಂಟ್ವಾಳ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮಂಗಳೂರಿಗೆ ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯ ಅವರ ಮುಂದೆಯೇ ಮಂಗಳೂರು ಕಾಂಗ್ರೆಸ್ ನಲ್ಲಿರುವ ಬಿರುಕು ಬಹಿರಂಗಗೊಂಡಿದೆ.

ಇಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಎಂಎಲ್ಎ ಅಭಯಚಂದ್ರ ಜೈನ್ ಮತ್ತು ಎಂಎಲ್ಸಿ ಐವನ್ ಡಿಸೋಜಾ ಅವರು ತಮ್ಮ ಬೆಂಬಲಿಗರ ಜೊತೆ ಬೇರೆ ಬೇರೆ ಪ್ಲೆಕಾರ್ಡ್ಸ್ ಗಳನ್ನು ಹಿಡಿದುಕೊಂಡು ನಿಂತಿದ್ದರು. ಸ್ವಲ್ಪ ತಡವಾಗಿ ಬಂದ ಸಿಎಂ ಅವರನ್ನು ಮಾತನಾಡಿಸಲು ಇಬ್ಬರೂ ನಾಯಕರು ನಾ ಮುಂದು ತಾ ಮುಂದು ಎಂದು ಜಟಾಪಟಿ ನಡೆಸಿದರು.ಒಂದು ಹಂತದಲ್ಲಿ ಜೈನ್ ತಮ್ಮ ಮುಂಗೈಯಿಂದ ಡಿಸೋಜಾ ರನ್ನು ಮುಂದೆ ಬರದಂತೆ ತಡೆಯುವ ದೃಶ್ಯಗಳು ಕ್ಯಾಮಾರಾದಲ್ಲಿ ಸೆರೆಯಾಗಿದೆ. ಈ ಮಧ್ಯದಲ್ಲಿ ಜೈನ್ ಜೊತೆಗಿದ್ದ ಮಿಥುನ್ ರೈ ಸಿಎಂ ಮುಂದೆ ಬಂದಾಗ ಈವನ್ ಡಿಸೋಜಾ ಅವರನ್ನು ತಳ್ಳಿದರು ಎಂದೂ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

Leave a Response