ಪುತ್ತೂರು : ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಗಡಿಕಲ್ಲು ನಿವಾಸಿ ಬೊಮ್ಮಿ ಎಂಬವರ ಮನೆಯು ಕುಸಿಯುವ ಹಂತದಲ್ಲಿದ್ದು ಮತ್ತು ಸಮರ್ಪಕ ಶೌಚಾಲಯದ ಕೊರತೆಯಿದ್ದು,ಅಂತೆಯೇ ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ನಿವಾಸಿ ಶಶಿರೇಖಾ ಎಂಬವರ ಮನೆಗೆ ಆರ್ಥಿಕ ಸಮಸ್ಯೆಯಿಂದ ವಿದ್ಯುತ್ ಸಂಪರ್ಕ ಸ್ಥಗಿತವಾಗಿರುವುದನ್ನು ಮನಗಂಡ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೊಮ್ಮಿ ಎಂಬವರ ಮನೆ ದುರಸ್ತಿ ಮತ್ತು ಶೌಚಾಲಯದ ದುರಸ್ತಿ ಮಾಡಿಕೊಡುವ ಮತ್ತು ಶಶಿರೇಖಾರವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆಯನ್ನು ನೀಡಿದರು.