ಕಡಬ : ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ನಡೆಸಿದ ಡಿಬೆಟ್ ಕಾರ್ಯಕ್ರಮದಲ್ಲಿ, ಮುಸ್ಲಿಂರ ಭಾವನೆಗಳಿಗೆ ದಕ್ಕೆ ತರುವಂತಹ ವಿಚಾರವನ್ನು ಪ್ರಸ್ತಾಪಿಸುದರ ಮೂಲಕ ಕೋಮುಗಲಭೆ ಸೃಷ್ಟಿಸಿ, ಪ್ರಚೋದನೆ ಎಸಗುವಂತೆ ಮಾಡಿದ್ದಾರೆ, ಎಂಬ ಆರೋಪದ ಮೇರೆಗೆ ಖಾಸಗಿ ವಾಹಿನಿಯ ನಿರೂಪಕ ಅಜಿತ್ ಹನುಮಕನವರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಡಬ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಪ್ರಮುಖರು ಮನವಿಸಲ್ಲಿಸಿದ್ದಾರೆ. ಕಡಬ ಪೋಲಿಸ್ ಠಾಣಾ ಸಹಾಯಕ ಠಾಣಾಧಿಕಾರಿ ಚಂದ್ರಶೇಕರ್ ದೂರು ಕೈಗೆತ್ತಿಕೊಂಡಿದ್ದಾರೆ.