Friday, September 20, 2024
ಸುದ್ದಿ

ಐಟಿ ದಾಳಿ: ಮಾಧ್ಯಮಗಳಿಗೆ ಮಾಹಿತಿ ನೀಡಿದ ಸುದೀಪ್ – ಕಹಳೆ ನ್ಯೂಸ್

ಬೆಂಗಳೂರು: ಐಟಿ ದಾಳಿ ಬಗ್ಗೆ ಸುದೀಪ್ ಮೊದಲ ಬಾರಿಗೆ ಇಂದು ಮಧ್ಯಾಹ್ನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಮ್ಮ ನಿವಾಸದ ಮೇಲೆ ಐಟಿ ದಾಳಿ ನಡೆದ ಬಗ್ಗೆ ಮಾಹಿತಿ ಪಡೆದುಕೊಂಡ ಬಗ್ಗೆ ಮೈಸೂರಿನಲ್ಲಿ ಶೂಟಿಂಗ್ ನಲ್ಲಿ ನಡೆಯುತ್ತಿದ್ದುದನ್ನು ಕ್ಯಾನ್ಸಲ್ ಮಾಡಿ ಬೆಂಗಳೂರಿನ ತಮ್ಮ ನಿವಾಸಕ್ಕೆ ಆಗಮಿಸಿದ್ದರು.

ಇದೇ ವೇಳೆ ಅವರು ಮಾತನಾಡಿ, ನಾನೇನು ತಪ್ಪು ಮಾಡಿಲ್ಲ. ನಮ್ಮ ವೈಯುಕ್ತಿಕ ಕಾರಣಗಳಿಂದಾಗಿ ನನ್ನ ಮೇಲೆ ಐಟಿ ದಾಳಿಯಾಗಿಲ್ಲ, ಮೂರು ಸಿನಿಮಾಕ್ಕೆ ಸಂಬಂಧಪಟ್ಟಂತೆ ಐಟಿ ದಾಳಿಯಾಗಿರಬಹುದು ಅಂತ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ಅವರು ಕಾನೂನಿಗೆ ನಾವು ಬೆಲೆ ನೀಡಬೇಕು, ಹೀಗಾಗಿ ನಾವು ಎಲ್ಲ ರೀತಿಯ ಸಹಕಾರ ನೀಡುವೆವು, ಇದಲ್ಲದೇ ಮನೆಯಲ್ಲಿ ನನ್ನ ತಾಯಿ ಮಾತ್ರ ಇದ್ದು ಈ ಸಲುವಾಗಿ ನಾನು ಬಂದೆ, ನಾನೇನು ತಪ್ಪು ಮಾಡಿಲ್ಲ.

ಜಾಹೀರಾತು

ನನ್ನ ಮನೆಗೆ ಬರುವ ವೇಳೆಯಲ್ಲಿ ಐಟಿ ಅಧಿಕಾರಿಗಳು ನನ್ನ ಮನೆ ಗೇಟ್ ಹಾರಿ ಬಂದಿಲ್ಲ. ಗೇಟ್ ಒಪನ್ ಮಾಡಿಕೊಂಡು ಬಂದಿದ್ದಾರೆ.