Friday, September 20, 2024
ಸುದ್ದಿ

ಜಲೀಲ್ ಕರೋಪಾಡಿ ಮರ್ಡರ್ ಆರೋಪಿಗಳು ಇಂದು ಮರಳಿ ಊರಿಗೆ |ಕಾದಿದೆಯೇ ಜೀವಭಯ?

ಮಂಗಳೂರು : ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ ಹೈಪ್ರೋಪೈಲ್ ಮರ್ಡರ್ ಕೇಸ್ ನಲ್ಲಿ ಅಂದರ್ ಆಗಿದ್ದ ಆರೋಪಿಗಳಿಗೆ ಹೈಕೋರ್ಟು ಈಗಾಗಲೇ ಶರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಈ ಆದೇಶದಂತೆ ಇಂದು ಆರೋಪಿಗಳು ಮೈಸೂರಿನ ಕಾರಾಗೃಹದಿಂದ ಹೊರಬರುತ್ತಿದ್ದಾರೆ.

ಆದರೆ, ಸದ್ರಿ ಪ್ರಕರಣದ ಆರೋಪಿಗಳಿಗೆ ಜೀವಭಯ ಇದೆಯೇ ?
ವ್ಯಾಪಾರದಿಂದ ಬದುಕು ಸಾಗಿಸುತ್ತಿದ್ದ ಇವರು ಇನ್ನು ಮುಂದೆ ಜನಸಾಮಾನ್ಯರ ಮಧ್ಯೆ ಬದುಕುವುದು ಕಷ್ಟವೇ? ಈ ಹಿಂದೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಡೆದು, ಆರೋಪಿ ಹೊತ್ತಿರುವವರೇ ಅಪರಾಧಗಳು ಎಂದು ಕೋರ್ಟು ತಿಳಿಸುವ ಮೊದಲೇ ಅವರ ಮೇಲೆ ಹಲ್ಲೆಯಾದ ಅದೆಷ್ಟೋ ನಿದರ್ಶನಗಳು ಈ ಹಿಂದೆ ನಡೆದಿದೆ. ಇವನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಕರೋಪಾಡಿ ಗ್ರಾಮಸ್ಥರಲ್ಲಿ ಮತ್ತೆ ಚರ್ಚೆಗಳು ನಡೆಯಲಾರಂಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

Leave a Response