Saturday, September 21, 2024
ಸುದ್ದಿ

ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಮನೋಹರ್‌ಗೆ ಪಿಎಚ್‌ಡಿ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನೋಹರ ಬಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿಯನ್ನು ಪ್ರದಾನಿಸಿದೆ.

ಡಾ.ಎಸ್.ಎಲ್ ಬೆಳಗಲಿ ಅವರ ಮಾರ್ಗದರ್ಶನದಲ್ಲಿ Physico – Chemical and Spectroscopic Characterization of Municipal Solid waste Composting Process ಎಂಬ ವಿಷಯದ ಕುರಿತು ಸಂಧೋಧನೆ ನಡೆಸಿ ಮನೋಹರ್ ಅವರು ಮಹಾಪ್ರಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

2015 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಯಲ್ಲಿಯೂ ಇವರು ತೇರ್ಗಡೆ ಹೊಂದಿರುತ್ತಾರೆ. ಇವರು ಪುಣಚ ಗ್ರಾಮದ ಬಡೆಕ್ಕನಡ್ಕ ಶೀನಪ್ಪ ಪೂಜಾರಿ ಹಾಗೂ ಸಲೋಚನಾ ದಂಪತಿ ಪುತ್ರ.

ಜಾಹೀರಾತು