ಮಂಜೇಶ್ವರ: ಬೆಜ್ಜ ಶ್ರೀ ಧೂಮವತಿ ಬಂಟ ದೈವಗಳ ಕ್ಷೇತ್ರದ ಭಂಡಾರ ಮನೆಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಿನ್ನೆ ನಡೆದಿದ್ದು ಈ ವೇಳೆ ಭಂಡಾರ ಮನೆಯ ನಿರ್ಮಾಣದ ಕಾಷ್ಠ ಶಿಲ್ಪಿ ಬಾಬು ರಾಜ ಆಚಾರ್ಯ ಕಡಂಬಾರು ಹಾಗೂ ಕಲ್ಲಿನ ಕೆಲಸ (ಮೇಸ್ತ್ರಿ)ವನ್ನು ಪೂರೈಸಿದ ಬಾಲಕೃಷ್ಣ ಶೆಟ್ಟಿ ಕಡಂಬಾರು ಇವರನ್ನು ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ವೇದಿಕೆಯಲ್ಲಿ ವಿವಿಧ ಗಣ್ಯರು ಉಪಸ್ಥಿತರಿದ್ದರು.