
ಪುತ್ತೂರು : ಪೆರ್ನೆ ಬಿಳಿಯೂರು ಗ್ರಾಮದ ಬಾಣಬೆಟ್ಟು ನಿವಾಸಿ ಪಕ್ರು ಗೌಡ ಎಂಬವರು ಹ್ರದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು,ಇದನ್ನು ಮನಗಂಡ ಉದ್ಯಮಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಖುದ್ದು ಮನೆಗೆ ಭೇಟಿ ನೀಡಿ ಆರ್ಥಿಕ ನೆರವನ್ನು ನೀಡಿದರು.ಈ ಸಂದರ್ಭದಲ್ಲಿ ಪೆರ್ನೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ ಗೌಡ,ಪೆರ್ನೆ ಗ್ರಾ.ಪಂ ಸದಸ್ಯ ನವೀನ್ ಪೂಜಾರಿ ಪದಬರಿ,ಬೂತ್ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ,ಕಾರ್ಯದರ್ಶಿ ಸುರೇಶ್ ಗೌಡ,ಜಯಂತ ಬಿಳಿಯೂರು,ಪಕ್ರು ಗೌಡರ ಪುತ್ರ ಮೋಹನ್ ಗೌಡ ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.