Friday, September 20, 2024
ಸುದ್ದಿ

ದೇಶದ ರಕ್ಷಣೆಯಲ್ಲಿ ಆರ್.ಎಸ್.ಎಸ್. ಪಾತ್ರ ಮಹತ್ವದ್ದು | ಸಂಘ ದೇಶ ಕಟ್ಟಿದೆ – ಕಲ್ಲಡ್ಕ ಪ್ರಭಾಕರ್ ಭಟ್.

ಮೈಸೂರು : ರಾಜೇಂದ್ರ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಸಂಚಲನದ ಸಭಾ ಕಾರ್ಯಕ್ರಮದಲ್ಲಿ ಭೌದಿಕ್ ನೆರವೇರಿಸಿದ ಆರ್.ಎಸ್.ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಧರ್ಮ. ಹಿಂದೂಗಳು ಶಾಂತಿ ಪ್ರಿಯರು, ಆರ್.ಎಸ್.ಎಸ್. ಕಳೆದ ಹತ್ತಾರು ವರ್ಷಗಳಿಂದ ದೇಶ ಸಂರಕ್ಷಣೆಯ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಸಂಘದ ದೇಶ ಕಟ್ಟಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಸುಮಾರು ೭೫೦ ಸಂಖ್ಯೆ ಪೂರ್ಣ ಗಣವೇಷಧಾರಿ ಸ್ವಯಂಸೇವಕರಿಂದ ಪಥಸಂಚಲನ ನಡೆಯಿತು. ವೇದಿಕೆಯಲ್ಲಿ ವಿಭಾಗ ಸಂಘಚಾಲಕರಾದ ಡಾ. ವಾಮಾನರಾವ್ ಬಾಪಟ್ ಮತ್ತು ಮಹಾನಗರ ಸಂಘಚಾಲಕರಾದ ಆರ್ ವಾಸುದೇವ ಭಟ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

Leave a Response