Friday, September 20, 2024
ಸುದ್ದಿ

ಇಕ್ಬಾಲ್ ಅಲಿಯಾಸ್ ಮಟನ್ ಇಕ್ಬಾಲ್ ಅಂದರ್: ಪ್ರಕರಣ ದಾಖಲು – ಕಹಳೆ ನ್ಯೂಸ್

ಮಾರಣಾಂತಿಕ ಹಲ್ಲೆ, ದೊಂಬಿ, ಸರಕಾರದ ಕೆಲಸಕ್ಕೆ ಅಡ್ಡಿ ಹೀಗೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಪ್ರಮುಖ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಅವರು ಬಂಧಿಸಿದ್ದಾರೆ. ಇಕ್ಬಾಲ್ ಅಲಿಯಾಸ್ ಮಟನ್ ಇಕ್ಬಾಲ್ ಇದೀಗ ಪೋಲಿಸರ ಅಥಿತಿಯಾಗಿದ್ದಾನೆ.

ನ್ಯಾಯಾಲಯದಿಂದ ಜಾಮೀನಿನ ಮುಖಾಂತರ ಬಿಡುಗಡೆಗೊಂಡಿದ್ದ, ನಂತರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದವನನ್ನು ದಿನಾಂಕ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪರ್ಲಿಯಾ ಎಂಬಲ್ಲಿ ಆರೋಪಿತನನ್ನು ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಚರಣೆಯಲ್ಲಿ ಅಪರಾಧ ವಿಭಾಗದ ಎಸ್.ಐ.ಹರೀಶ್, ಸಿಬ್ಬಂದಿ ಗಳಾದ ಗೋಣಿ ಬಸಪ್ಪ ಮಲಿಕ್ ಭಾಗವಹಿಸಿದ್ದರು

ಜಾಹೀರಾತು