Friday, September 20, 2024
ರಾಜಕೀಯಸುದ್ದಿ

ಬಿಜೆಪಿ ಸರ್ಕಾರವೇ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಕಾರಣ: ರಾಹುಲ್‍ ಗಾಂಧಿ – ಕಹಳೆ ನ್ಯೂಸ್

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿ.ಆರ್.ಪಿ.ಎಫ್‍. ಯೋಧರ ಮೇಲೆ ನಡೆದ ದಾಳಿಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಸರ್ಕಾರವೇ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಕಾರಣ ಅಂತಾ ಕಾಂಗ್ರೆಸ್‍ ಅಧ್ಯಕ್ಷ ರಾಹುಲ್‍ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಇವತ್ತು ಹಾವೇರಿಯಲ್ಲಿ ಕಾಂಗ್ರೆಸ್‍ ಪರಿವರ್ತನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್‍ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುಲ್ವಾಮಾ ದಾಳಿಯಲ್ಲಿ 40 ಯೋಧರ ಸಾವಿಗೆ ಬಿಜೆಪಿಯೇ ನೇರ ಹೊಣೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನನ್ನು ಅಂದಿನ ಬಿಜೆಪಿ ಸರ್ಕಾರ ಬಿಟ್ಟಿದ್ದು ಇದಕ್ಕೆಲ್ಲಾ ಕಾರಣ ಅಂತಾ ಹರಿಹಾಯ್ದಿದ್ದಾರೆ.

ಜಾಹೀರಾತು

ಅಂದಿನ ಬಿಜೆಪಿ ಸಚಿವರು, ನಾಯಕರುಗಳು ಮಸೂದ್‍ ಅಜರ್ ನನ್ನು ಮಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ. ಇದನ್ನು ಎಲ್ಲಿಯೂ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡ್ತಿಲ್ಲ.

ಹೀಗಾಗಿ ಪ್ರಧಾನಿ ಮೋದಿಯವರು ತಮ್ಮ ಮುಂದಿನ ಭಾಷಣಲ್ಲಿ ಮಸೂದ್‍ ಅಜರ್ ನನ್ನ ಪಾಕಿಸ್ತಾನಕ್ಕೆ ಬಿಟ್ಟು ಬಂದಿದ್ದು ಯಾಕೆ ಅಂತಾ ಹೇಳಬೇಕು ಎಂದಿದ್ದಾರೆ.