Recent Posts

Saturday, September 21, 2024
ರಾಜಕೀಯಸುದ್ದಿ

ಬಿಜೆಪಿ ನಾಯಕರ ಮನೆ ಮೇಲೆ ಏಕೆ ಐಟಿ ದಾಳಿ ಮಾಡುತ್ತಿಲ್ಲ: ಸಂಸದ ಉಗ್ರಪ್ಪ- ಕಹಳೆ ನ್ಯೂಸ್

ಬಳ್ಳಾರಿ: ಕೇವಲ ಕಾಂಗ್ರೆಸ್-ಜೆಡಿಎಸ್ ನಾಯಕರನ್ನೇ ಟಾರ್ಗೆಟ್ ಮಾಡಲಾಗಿದೆ. ಬಿಜೆಪಿ ನಾಯಕರ ಮನೆ ಮೇಲೆ ಏಕೆ ಐಟಿ ದಾಳಿ ಮಾಡುತ್ತಿಲ್ಲ ಎಂದು ಸಂಸದ ಉಗ್ರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಐಟಿ ನೋಟೀಸ್ ನೀಡಿದೆ. ನಾನು ಈಗಾಗಲೇ ಮೂರು ಬಾರಿ ಉತ್ತರ ಕೊಟ್ಟಿದ್ದೇನೆ. ಚುನಾವಣೆ ಸಂದರ್ಭದಲ್ಲಿ ನಿನ್ನೆ ಏಕಾಏಕಿ ಐಟಿ ದಾಳಿ ನಡೆದಿದೆ. ಇದು ರಾಜಕೀಯ ಪ್ರೇರಿತ ಎಂದು ದೂರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿಯವರೇನೂ ಹಣ ಹಂಚದೆಯೇ ಚುನಾವಣೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಈವರೆಗೆ ಒಬ್ಬೇಒಬ್ಬ ಬಿಜೆಪಿ ನಾಯಕರ ಮನೆ ಮೇಲೆ ಐಟಿ ದಾಳಿ ನಡೆದಿಲ್ಲ.

ಜಾಹೀರಾತು

ಇದನ್ನು ನೋಡಿದರೆ ಕೇವಲ ಕಾಂಗ್ರೆಸ್-ಜೆಡಿಎಸ್ ನಾಯಕರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ ಎಂದು ಅನ್ನಿಸದೆ ಇರದು ಎಂದರು.