ಬೆಳಗಾವಿ:ತುಂಡಾಗಿ ಕತ್ತರಿಸಿ ಬಿದ್ದಿದ್ದ ತಂತಿ ತುಳಿದು ನಾಲ್ವರ ದುರ್ಮರಣ ಹೊಂದಿದ ಘಟನೆ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ರೇವಪ್ಪಾ ಕಲ್ಲೋಳಿ(35), ಹೆಂಡತಿ ರತ್ನವ್ವಾ ಕಲ್ಲೋಳಿ(30), ಮಗ ಸಚ್ಚೀನ್ (8), ರೇವಪ್ಪನ ಅಣ್ಣನ ಮಗ ಕ್ರಿಷ್ಣಾ ಮೃತ ದುರ್ದೈವಿಗಳು.
ಇಂದು ಬೆಳಗಿನ ಜಾವ ಮನೆಯಿಂದ ಹೊಲಕ್ಕೆ ಚಕ್ಕಡಿಯಲ್ಲಿ ಹೊರಟಿದ್ದ ಇವರಿಗೆ ಅಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿದ್ದು ಎರಡು ಎತ್ತುಗಳೂ ಸಹ ಸತ್ತಿವೆ.
ಜೋತು ಬಿದ್ದಿದ್ದ ತಂತಿಯನ್ನು ತೆಗೆದುಹಾಕಬೇಕೆಂದು ಗ್ರಾಮಸ್ಥರು ಹೆಸ್ಕಾಮ್ ಸಿಬ್ಬಂದಿಗೆ ಅನೇಕ ಬಾರಿ ತಿಳಿಸಿದರೂ ಲೈನ್ ಮನ್ ಈ ಹೊಲದತ್ತ ಹಾಯ್ದಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.ಇಂದು ಮುಂಜಾನೆ ಸಿಬ್ಬಂದಿಯ ಕ್ರಿಮಿನಲ್ ನಿರ್ಲಕ್ಷವು ಕಲ್ಲೋಳಿ ಕುಟುಂಬದ ಗಂಡ,ಹೆಂಡತಿ,ಪುತ್ರಿ ಮತ್ತು ಇನ್ನೊಬ್ಬರನ್ನು ಬಲಿ ತೆಗೆದುಕೊಂಡಿದೆ.
ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಬರುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ಧಾವಿಸಿದ್ದು ತನಿಖೆ ನಡೆದಿದೆ.