Recent Posts

Saturday, September 21, 2024
ಸುದ್ದಿ

ಹಟ್ಟಿಯಿಂದ ಸಾಕು ದನಗಳ ಕಳ್ಳತನ – ಕಹಳೆ ನ್ಯೂಸ್

ಬಂಟ್ವಾಳ: ಸಾಕು ದನಗಳನ್ನು ಹಟ್ಟಿಯಿಂದ ಕಳ್ಳತನ ಮಾಡಿದ ಘಟನೆ ಸಜೀಪ ಪಡು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪ ಪಡು ಗ್ರಾಮದ ಮಿತ್ತಪಡ್ಪು ನಿವಾಸಿ ಧರ್ಣಪ್ಪ ಸಪಲ್ಯ ಎಂಬವರ ಮನೆಯಲ್ಲಿ ಸಾಕುತ್ತಿದ್ದ ಹಟ್ಟಿಯಿಂದ ಎರಡು ದನಗಳನ್ನು ಮದ್ಯ ರಾತ್ರಿ ವೇಳೆ ಕಳ್ಳತನ ಮಾಡಿದ್ದಾರೆ.ಅದರಲ್ಲಿ ಒಂದು ತುಂಬು ಗರ್ಭಿಣಿ ಹಸುವಾಗಿದೆ. ಗರ್ಭಿಣಿ ಹಸುವನ್ನು ಕೂಡಾ ಅವರು ಕಳ್ಳತನ ಮಾಡಿರುವುದು ಮನೆಯವರಲ್ಲಿ ಬೇಸರ ತಂದಿದೆ.

ಕಳೆದ ಎರಡು ವರ್ಷದ ಹಿಂದೆ ನೆರೆ ಮನೆಯ ಸುಬ್ರಹ್ಮಣ್ಯ ಎಂಬವರ ಹಟ್ಟಿಯಿಂದ ಒಂದು ದನ ಕಳವು ಮಾಡಿದ್ದರು. ಒಂದು ತಿಂಗಳ ಹಿಂದೆ ಮನೆಯ ನಾಯಿಗೆ ವಿಷ ಹಾಕಿ ಕೊಂದಿದ್ದರು. ವಾರದ ಹಿಂದೆ ಧರ್ಣಪ್ಪ ಅವರ ಮನೆಗೆ ಇಬ್ಬರು ಬಂದಿದ್ದು ದನಮಾರಟ ಮಾಡುತ್ತೀರಾ ಎಂದಿದ್ದಾರೆ. ಇಲ್ಲ ಎಂದು ಹೇಳಿದ್ದಕ್ಕೆ ವಾಪಾಸು ಹೋಗಿದ್ದರು. ಚುನಾವಣಾ ಸಂದರ್ಭದಲ್ಲಿ ಬಿಗಿ ಬಂದೋ ಬಸ್ತ್ ಇದ್ದರೆ ಕಳ್ಳತನ ಹೇಗೆ ನಡೆಯುತ್ತದೆ, ಈ ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು