Recent Posts

Saturday, September 21, 2024
ಸುದ್ದಿ

ಮೋದಿ ಮತ ಪ್ರಚಾರಕ್ಕೆ ಗಾಳಿ ಮಳೆ ಅಡ್ಡಿ – ಕಹಳೆ ನ್ಯೂಸ್

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಪಕ್ಷದ ಅಭ್ಯರ್ಥಿಗಳ ರಾಜಕೀಯ ನಾಯಕರು ಭರ್ಜರಿಯಾಗಿ ಮತಯಾಚನೆ ಮಾಡುತ್ತಿದ್ದಾರೆ, ಅಂತೇಯೆ ನರೇಂದ್ರ ಮೋದಿ ರಾಜ್ಯದಾದ್ಯಂತ ಸಂಚರಿಸಿ ಮತಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ತವರು ರಾಜ್ಯ ಗುಜರಾತ್‍ಗೆ ಭೇಟಿ ನೀಡಿ ಮತಪ್ರಚಾರ ಮಾಡಬೇಕಿತ್ತು.

ಆದರೆ ಗುಜರಾತಿನ ಸಬರಕಾಂತ ಜಿಲ್ಲೆಯ ಹಿಮ್ಮತ್ ನಗರದಲ್ಲಿ ಮೋದಿ ಅವರ ರ‍್ಯಾಲಿ ಆಯೋಜಿಸಲಾಗಿದ್ದು, ಇದಕ್ಕಾಗಿ ಬೃಹತ್ ವೇದಿಕೆ ಜೊತೆ ಪ್ರಚಾರ ಸಭೆಗೆ ಆಗಮಿಸುವ ಸಾರ್ವಜನಿಕರಿಗೆ ಪೆಂಡಾಲ್ ಹಾಕಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಗಾಳಿ ಹಾಗೂ ಮಳೆ ಕಾರಣ ಪೆಂಡಾಲ್ ಕುಸಿದು ಬಿದ್ದಿದ್ದು, ಅಂತಿಮ ಕ್ಷಣದಲ್ಲಿ ಈ ಘಟನೆ ಸಂಭವಿಸಿರುವುದರಿಂದ, ಬಿಜೆಪಿ ನಾಯಕರು ಇರುವ ಅಲ್ಪ ಸಮಯದಲ್ಲೇ ಇದನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ನರೇಂದ್ರ ಮೋದಿಯವರ ಈ ರ‍್ಯಾಲಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಜಾಹೀರಾತು