Friday, September 20, 2024
ಸುದ್ದಿ

ಮಾರ್ಚ್‌ಗೆ ಎತ್ತಿನಹೊಳೆ ಲೋಕಾರ್ಪಣೆಯಾಗಲಿದೆ : ಸಿಎಂ

ಮಧುಗಿರಿ :ಬರುವ ಮಾರ್ಚ್‌ನಲ್ಲಿ ಎತ್ತಿನಹೊಳೆ ಯೋಜನೆ ಲೋಕಾರ್ಪಣೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೀರಿನ ಸಮಸ್ಯೆಯನ್ನು ನೀಗುವ ಎತ್ತಿನಹೊಲೆ ಕಾಮಗಾರಿ ಪ್ರಗತಿಯಲ್ಲಿದೆ. ಬರುವ ಮಾರ್ಚ್‌ನಲ್ಲಿ ಯೋಜನೆ ಲೋಕಾರ್ಪಣೆಯಾಗಲಿದೆ ಎಂದರು.

ಮಧುಗಿರಿಯಲ್ಲಿಂದು ಸಾಮೂಹಿಕ ವಿವಾಹ ಕಾರ್ಯಕ್ರಮಗಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂ. ಮೀಸಲಿರಿಸಿದ್ದೇವೆ. ಅದರಲ್ಲಿ ಈಗಾಗಲೇ 2,500 ಕೋಟಿ ರೂ. ಖರ್ಚಾಗಲಿದೆ ಎಂದವರು ಹೇಳಿದರು.
ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕು. ಶ್ರೀಮಂತರು ವಿವಾಹದ ನೆಪದಲ್ಲಿ ದೊಡ್ಡ ಪ್ರದರ್ಶನ ಮಾಡುತ್ತಾರೆ. ಅವರೂ ಸಹ ಸರಳ ವಿವಾಹ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.ಸಾಲ ಮಾಡಿ ಮದುವೆಯಾಗಬಾರದು. ಸಂಸಾರ ಚೆನ್ನಾಗಿ ಇರಬೇಕು. ಆ ಕಾರಣಕ್ಕಾಗಿಯೇ ತಮ್ಮ ಸರ್ಕಾರ ಅಂತರ್ಜಾತಿ ವಿವಾಹಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಹೇಳಿದ ಅವರು, ಮಕ್ಕಳಿಲ್ಲದವರು ಕೊರಗುವ ಬದಲು ಬೇರೆ ಮಕ್ಕಳನ್ನು ತಮ್ಮ ಮಕ್ಕಳು ಎಂದು ಭಾವಿಸಿ ಬಡ ಮಕ್ಕಳಿಗೆ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

Leave a Response