Friday, September 20, 2024
ಸುದ್ದಿ

‘ ‘ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 38

ಮಂಜಿನ ಮಲ್ಲಿಗೆ ಮುತ್ತಿನ ತೆರದಿ ಹೊಳೆಹೊಳೆವುದು ತಾ ನೋಡ |
ಮೊಸರಿನ ಗಡಿಗೆ ಒಡೆಯಿತೊ ಎದರೇ ಬಾನಂಗಳದಿ ತಿಳಿಮೋಡ||
ನಂದನವನದಾ ಗೋಪಗೋಪಿಯರ ನವರಸ ನಾಟಕ ಹೊಂಗಿರಣ|
ಅರುಣೋದಯದಾ ಹೊನ್ನ ಶರಧಿಯೊಳು ಜಗಮಗಿಸಿದೆ ತಾ ಅರುಣ||೧||

ಹಕ್ಕಿಯು ಗೂಡನು ಬಿಟ್ಟಿತು ನೋಡು ಅವಸರದವಸರದಲಿ ಈಗ|
ದಿಕ್ಕನು ತೋಚದೆ ಕಂಗೆಡಲಾರವು ಮುಂದಿನ ಬದುಕಿಗೆ ಅದೆ ರಾಗ ||
ದೂರದ ಊರನು ಸೇರುವ ಪಯಣ ಸಾಗರದಾಚಿನ ನವಯುಗಕೆ|
ಬರೆದಿದೆ ಮುನ್ನುಡಿ ಕಲರವದಲಿ ತಾ ಅರುಣೋದಯದಾ ನವಪದಕೆ||೨||

ಜಾಹೀರಾತು
ಜಾಹೀರಾತು
ಜಾಹೀರಾತು

ರಂಗೋಲಿಯ ಬರೆದರು ಹೆಂಗಳೆಯರುತಾ ಮುಂದಣ ಬಾಗಿಲ ಹೊಸ್ತಿಲಲಿ|
ಶೃಂಗಾರದ ಜೋಗುಳ ಪಾಡುತ ಪಾಡುತ ಮಧ್ಯಮ ಪಂಚಮ ರಾಗದಲಿ||
ಅಂಬಾ ಎಂಬ ಕರುವಿನ ಕೂಗು ಕರೆಯಿತು ಅಮೃತ ಘಳಿಗೆಯಲಿ|
ತಣ್ಣನೆಗಾಳಿ ಬೀಸುತ ಬೀಸುತ ನಿದಿರಾ ದೇವಿಯ ಸಹಮತದಲ್ಲಿ||೩||

ಜಾಹೀರಾತು

ಮುಂಗೋಯು ಸ್ವರವನು ಸೇರಿಸಿ ಕುಣಿಯಿತು ನಸುಕಿನ ವೇಳೆಯಲಿ|
ಕಣ್ಣನು ತೆರೆದರೆ ಉಷೆ ನಗುತಿಹಳು ಸ್ವರ್ಣದ ಬಾಗಿಲ ತೆರೆಯುತಲಿ||
ಲಕ್ಷ್ಮೀದೇವಿಯು ಒಳ ಬರಲೆಂದು ಪತಿನಾರಾಯಣ ಜೊತೆಗೂಡಿ|
ದೇವರ ಮನೆಯಾ ಜ್ಯೋತಿಯ ಬೆಳಗಿಸಿ ಸುಪ್ರಭಾತ ತಾ ಹಾಡಿ||೪||

Leave a Response