Friday, September 20, 2024
ಸುದ್ದಿ

ಬಡವರಿಗೆ ಗೃಹ ನಿರ್ಮಾಣಕ್ಕೆ ಸಹಾಯ ಹಸ್ತ ಚಾಚಿದ ಪುತ್ತೂರಿನ ಬಿಜೆಪಿ ಮುಖಂಡ ಅಶೋಕ್ ರೈ

 

ಪುತ್ತೂರು : ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ, ಉದ್ಯಮಿ ಪುತ್ತೂರಿನ ಅಶೋಕ್ ಕುಮಾರ್ ರೈಯವರ ನೇತ್ರತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ನಿವಾಸಿ ಮೇರಿ ಎಂಬವರ ಮನೆ ನಿರ್ಮಾಣಕ್ಕೆ ಸಿಮೆಂಟ್,ಹೊಯಿಗೆ,ದಾರಂದ,ಕುರಿಯ ಗ್ರಾಮದ ಅಮ್ಮುಂಜ ನಿವಾಸಿ ಬೇಬಿ ಎಂಬವರಿಗೆ ಶೌಚಾಲಯ ನಿರ್ಮಾಣಕ್ಕೆ ಮತ್ತು ಮನೆ ದುರಸ್ತಿಗೆ ಸಿಮೆಂಟ್,ಹೊಯಿಗೆ,ಕೆಂಪು ಕಲ್ಲು,ಮುಂಡೂರು ಗ್ರಾಮದ ಹಿಂದಾರು ನಿವಾಸಿ ಶೀನಪ್ಪ ಪೂಜಾರಿ ಎಂಬವರ ಮನೆ ನಿರ್ಮಾಣಕ್ಕೆ ಸಿಮೆಂಟ್,ಹೊಯಿಗೆ,ಕೊಡಿಪಾಡಿ ಗ್ರಾಮದ ಅರ್ಕ ನಿವಾಸಿ ವಿಠಲ ಆಚಾರಿ ಎಂಬವರ ಮನೆ ನಿರ್ಮಾಣಕ್ಕೆ ಸಿಮೆಂಟ್,ಕುಳ ಗ್ರಾಮದ ಕಾರ್ಯಾಡಿ ನಿವಾಸಿ ಬೇಬಿಕಲಾ ಎಂಬವರ ಮನೆ ಕೆಲಸಕ್ಕೆ ಸಿಮೆಂಟ್,ಕೆಯ್ಯೂರು ಗ್ರಾಮದ ಕಿನ್ಯಾನ ನಿವಾಸಿ ಪದ್ಮಾವತಿ ಎಂಬವರ ಮನೆಯ ಗಾರೆ ಕೆಲಸಕ್ಕೆ ಸಿಮೆಂಟ್ ಮತ್ತು ಹೊಯಿಗೆಯನ್ನು ಒದಗಿಸಲಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ ಟ್ರಸ್ಟ್ ವತಿಯಿಂದ ಪುತ್ತೂರು ತಾಲೂಕಿನ ಸೇಡಿಯಾಪು ನಿವಾಸಿ ಕಾವೇರಿ ಎಂಬವರಿಗೆ ಮನಸ್ವಿನಿ ಯೋಜನೆಗೆ ಮತ್ತು ಪಡಿತರ ಚೀಟಿಗೆ ಅರ್ಜಿ,ಕೋಡಿಂಬಾಡಿ ಗ್ರಾಮದ ನಿಡ್ಯ ನಿವಾಸಿ ಕ್ರಷ್ಣಪ್ಪ ನಾಯ್ಕ ಎಂಬವರಿಗೆ ಸಂದ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲಾಗಿರುತ್ತದೆ.ಅಲ್ಲದೇ ಚಿಕ್ಕಮುಡ್ನೂರು ಗ್ರಾಮದ ಕೇಪುಳು ನಿವಾಸಿ ಮೋಹನ ಮೇಸ್ತ್ರೀ ಎಂಬವರಿಗೆ ಟ್ರಸ್ಟ್ ವತಿಯಿಂದ ರೇಶನ್ ಕಾರ್ಡ್ ಒದಗಿಸಲಾಗಿರುತ್ತದೆ.ಬಲ್ನಾಡು ಗ್ರಾಮದ ವಸಂತ,ವಸಂತಿ ಮತ್ತು ಅರುಣಾ.ಪಿ ಎಂಬವರ ಮತದಾನದ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲಾಗಿರುತ್ತದೆ.

ಜಾಹೀರಾತು

Leave a Response