
ಈ ಬಾರಿಯ ವಿಶ್ವಕಪ್ ನಾವು ಗೆದ್ದೇ ಗೆಲ್ತೀವಿ, ಇದನ್ನು ಭಾರತೀಯ ಯೋಧರಿಗೆ ಅರ್ಪಣೆ ಮಾಡ್ತೀವಿ ಅಂತಾ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ನಿನ್ನೆ ಭಾರತ ತಂಡದ ನಾಯಕ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಕೊಹ್ಲಿ, ಭಾರತದ ಯೋಧರಿಗಾಗಿ ನಾವು ಈ ಬಾರಿಯ ವಿಶ್ವಕಪ್ ಗೆಲ್ಲುತ್ತೇವೆ. ಇಂತಹ ಸಾಧನೆ ಮಾಡಲು ನಮಗೆ ಹಲವು ರೀತಿ ಸ್ಫೂರ್ತಿ ಸಿಗಬಹುದು. ಕೆಲವರು ತಮ್ಮ ಕುಟುಂಬದಿಂದ ಸ್ಫೂರ್ತಿ ಪಡೆಯಬಹುದು. ಆದ್ರೆ ನಮ್ಮ ಯೋಧರಿಂದ ಸಿಗುವುದಕ್ಕಿಂತಲೂ ಹೆಚ್ಚು ಸ್ಫೂರ್ತಿ ಬೇರೆಲ್ಲಿಂದಲೂ ಸಿಗಲು ಸಾಧ್ಯವಿಲ್ಲ. ಹೀಗಾಗಿ ನಾವು ಈ ಬಾರಿಯ ವರ್ಲ್ಡ್ಕಪ್ ಗೆದ್ದೇ ಗೆಲ್ಲುತ್ತೇವೆ ಹಾಗೂ ಅದನ್ನು ನಮ್ಮ ಸೇನೆಗೆ ಅರ್ಪಣೆ ಮಾಡ್ತೀವಿ ಅಂತಾ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.