Saturday, September 21, 2024
ಸುದ್ದಿ

ಆರ್‍ಎಸ್‍ಎಸ್ ಕಾರ್ಯಕರ್ತರಾಗಲಿದ್ದಾರ ಅಣ್ಣಾಮಲೈ..!!- ಕಹಳೆ ನ್ಯೂಸ್

9 ವರ್ಷಗಳ ಕಾಲ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅಣ್ಣಾಮಲೈ ಇಂದು ಧಿಡೀರನೆ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಹೀಗಾಗಿ ಅಣ್ಣಾಮಲೈ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಅವರು ರಾಜಕೀಯಕ್ಕೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂತು. ಆದರೆ ಅವರು ನನಗೆ ಬೇರೆ ರಂಗಗಳಲ್ಲಿ ಕೆಲಸ ಮಾಡಲು ಆಸಕ್ತಿ ಇದೆ ಎಂದು ಹೇಳಿಕೆ ನೀಡಿದ್ದಾರೆ. ಭಾರತದ ಹಾಗೂ ಜಗತ್ತಿನ ಅತ್ಯಂತ ದೊಡ್ಡ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಲಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಣ್ಣಾಮಲೈ ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲಿ ಆರ್‍ಎಸ್‍ಎಸ್ ಪ್ರಭಾವವಿತ್ತು. ಅದರ ಪ್ರಭಾವ ಇವರ ಮೇಲೂ ಆಗಿತ್ತು. ಆರ್‍ಎಸ್‍ಎಸ್ ಕಾರ್ಯವೈಖರಿ ಮೇಲೆ ಒಲವಿತ್ತು. ಹೀಗಾಗಿ ರಾಜಿನಾಮೆ ಬಳಿಕ ತಮ್ಮ ಮಾತೃಭೂಮಿ ತಮಿಳುನಾಡಿನ ಕೊಯಂಬತ್ತೂರಿಗೆ ತೆರೆಳಲಿರುವ ಇವರು, ಅಲ್ಲೇ ಆರ್‍ಎಸ್‍ಎಸ್ ಅನ್ನು ಸೇರಿ ಅದರಲ್ಲೇ ತಮ್ಮ ಮುಂದಿನ ಕಾರ್ಯವನ್ನು ನಡೆಸಲು ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ.

ಜಾಹೀರಾತು

ಈ ಎಲ್ಲಾ ವಿಷಯಗಳಿಗೂ ಪುಷ್ಟಿ ನೀಡುವಂತೆ ಅಣ್ಣಾಮಲೈ ಇತ್ತೀಚಿಗೆ ಮೋದಿ ಹಾಗೂ ಅಮಿತ್ ಶಾರನ್ನು ಭೇಟಿ ಕೂಡ ಮಾಡಿದ್ದರು.