Friday, September 20, 2024
ಸುದ್ದಿ

ಪುತ್ತೂರಿನ ಕರ್ಕುಂಜದ ಬಡನಿವಾಸಿಗೆ ಜಾಗದ ನೋಂದಾವಣಿ ಮಾಡಿಸಿ, ಮಾನವೀಯತೆ ಮರೆದ ಅಶೋಕ್ ರೈ

ಪುತ್ತೂರು : ತಾಲೂಕಿನ ಬಪ್ಪಳಿಗೆಯ ಕರ್ಕುಂಜ ನಿವಾಸಿ ಗುಲಾಬಿ ಎಂಬವರ ಜಾಗದ ದಾಖಲೆಯು ಅಸಮರ್ಪಕತೆಯಿಂದ ಕೂಡಿದ್ದು ಇದನ್ನು ಸರಿಪಡಿಸಲು ಸಂಬಂಧ ಪಟ್ಟ ಇಲಾಖೆಗಳಿಗೆ ಗುಲಾಬಿಯವರು ಸತತ ಕಳೆದ 4 ವರ್ಷಗಳಿಂದ ಅಲೆದಾಡಿದರೂ ಯಾವುದೇ ಪ್ರಯೋಜನವಾಗದೇ ಇರುವುದರಿಂದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಗೆ ಬಂದು ವಿಚಾರ ತಿಳಿಸಿದಾಗ ಇದಕ್ಕೆ ಸ್ಪಂದಿಸಿ ನಿರಂತರ ಮೂರು ತಿಂಗಳ ಪ್ರಯತ್ನದಿಂದ ಅಸಮರ್ಪಕತೆಯಿಂದ ಕೂಡಿದ್ದ ಜಾಗದ ದಾಖಲೆಯನ್ನು ಸರಿಪಡಿಸುವುದರ ಜೊತೆಗೆ ಗುಲಾಬಿ ಎಂಬವರ ಹೆಸರಿಗೆ ಜಾಗವನ್ನು ನೋಂದಾವಣೆ ಮಾಡಿ ಕೊಡಲಾಗಿದೆ. ಜಾಗದ ದಾಖಲೆಯ ನೋಂದಾವಣಾ ಮೂಲ ಪ್ರತಿಯನ್ನು ಕಛೇರಿಯಲ್ಲಿ ಗುಲಾಬಿಯವರಿಗೆ ಹಸ್ತಾಂತರಿಸಲಾಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು

Leave a Response