Friday, September 20, 2024
ಸುದ್ದಿ

ತುಳು ಮತ್ತು ತುಳುನಾಡಿನ ಬಗ್ಗೆ ಅವಹೇಳನಗೈದ ಕನ್ನಡ ಸಂಘಟನೆ ಮುಖಂಡನ ವಿರುದ್ಧ ದೂರು ದಾಖಲು – ಕಹಳೆ ನ್ಯೂಸ್

 

ಮಂಗಳೂರು: ಪಂಚದ್ರಾವಿಡ ಭಾಷೆಗಳಲ್ಲೊಂದಾದ ತುಳುಭಾಷೆಯ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನ ಮಾಡಿದ ಕನ್ನಡ ಸಂಘಟನೆಯೊಂದರ ಮುಖಂಡನೆಂದು ಹೇಳಿಕೊಂಡ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಆತನ ವಿರುದ್ಧ ಕೊಡವರು ಮತ್ತು ತುಳುವರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನಲ್ಲಿರುವ ಕನ್ನಡ ಸಂಘಟನೆಯೊಂದರ ನಗರ ಸಂಘಟನಾ ಕಾರ‍್ಯದರ್ಶಿ ಎಂದು ಹೇಳಿಕೊಂಡ ಜಾನ್‌ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ತುಳು ಭಾಷೆ ಬಗ್ಗೆ ಅವಹೇಳನ ಮಾಡಿದ್ದಲ್ಲದೆ, ಕೀಳು ಭಾಷೆಯಲ್ಲಿ ಮಂಗಳೂರಿಗರನ್ನು ಅವಹೇಳನ ಮಾಡಿದ್ದಾನೆ ಎನ್ನಲಾಗಿದೆ .ತನ್ನ ಸಂದೇಶದಲ್ಲಿ ‘ತುಳುವರನ್ನು ಆಂಗ್ಲರು ಭಾರತಕ್ಕೆ ಗೋವಾ ಮುಖಾಂತರ ಬಂದಾಗ ಕರ್ನಾಟಕಕ್ಕೆ ಆಶ್ರಯ ಬೇಡಿ ಓಡಿ ಬಂದ ನರಿಗಳು. ನೀವು ಅಪ್ಪಟ್ಟ ಭಾರತೀಯರಲ್ಲ, ಆಂಗ್ಲರು’ ಎಂದು ಟೀಕಿಸಿದ್ದಾನೆ. ಇದು ಮಾತ್ರವಲ್ಲದೆ ತುಳುವರ ಬಗ್ಗೆ, ಮಹಿಳೆಯರ ಅಶ್ಲೀಲಕರ ಪದ ಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ .

ಜಾಹೀರಾತು

ವರದಿ : ಕಹಳೆ ನ್ಯೂಸ್

.

Leave a Response