Saturday, September 21, 2024
ಸುದ್ದಿ

ಮರೋಳಿ ವಾರ್ಡಿನ ಬಜ್ಜೋಡಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಮುಖಂಡರಿಂದ ಗುದ್ದಲಿ ಪೂಜೆ – ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರೋಳಿ ವಾರ್ಡಿನ ಬಜ್ಜೋಡಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯ ಮುಖಂಡರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂಧರ್ಭದಲ್ಲಿ ಮರೋಳಿ ವಾರ್ಡ್ ಅಧ್ಯಕ್ಷರಾದ ಜಗನ್ನಾಥ್ ದೊಡ್ಡಮನೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಮರೋಳಿ, ವಾರ್ಡ್ ಮಹಿಳಾ ಮೋರ್ಚದ ಅಧ್ಯಕ್ಷರಾದ ಸರಳ, ಬಿಜೆಪಿ ನಾಯಕರಾದ ರಮೇಶ್ ಕಂಡೆಟ್ಟು, ಭಾಸ್ಕರಚಂದ್ರಶೆಟ್ಟಿ, ಅಜಯ್, ಪ್ರಮುಖರಾದ ಜಗದೀಶ್ ಶೆಣೈ, ಕೃಷ್ಣಪ್ಪ, ಪುರುಷೋತ್ತಮ, ಸುವರ್ಣ, ಪ್ರಕಾಶ್ ನಾಯಕ್, ರಂಜಿತ್, ಮಾಲತಿ ಶೆಟ್ಟಿ, ಅರುಣ್ ಶೆಟ್ಟಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು