Friday, September 20, 2024
ಸುದ್ದಿ

ಪುತ್ತೂರು: ತಾಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡ ಯಕ್ಷಚಿಣ್ಣರ ಬಳಗ- ಕಹಳೆ ನ್ಯೂಸ್

ಪುತ್ತೂರು: ಸರ್ಕಾರಿ ಪದವಿಪೂರ್ವ ಕಾಲೇಜು ಉಪ್ಪಿನಂಗಡಿ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಚಂದ್ರಶೇಖರ ಸುಳ್ಯಪದವು ಇವರ ನೇತೃತ್ವದ ಯಕ್ಷ ಚಿಣ್ಣರ ಬಳಗ ತಂಡ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದ
ಯಕ್ಷಚಿಣ್ಣರ ಬಳಗದ ವಿದ್ಯಾರ್ಥಿಗಳಾದ ಧನುಷ್, ಅವನಿ ಬೆಳ್ಳಾರೆ, ಶ್ರೇಯ ಆಚಾರ್ ವೈಯುಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ಪ್ರದೀಪ್ ಕೃಷ್ಣ, ಆದಿತ್ಯ ನಾರಾಯಣ,ಖುಷಿ ರೈ ಗುಂಪು ವಿಭಾಗದಲ್ಲಿ ಪ್ರಥಮ ಪಡೆದು ಅಕ್ಟೋಬರ್ 30ಕ್ಕೆ ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು