Friday, September 20, 2024
ಸುದ್ದಿ

ಪೆರ್ನೆಯಲ್ಲಿ ಅಕ್ಟೋಬರ್ 13 ರಂದು ನಡೆಯಲಿದೆ ಸಾರ್ವಜನಿಕ ಕ್ರೀಡಾಕೂಟ -ಕಹಳೆ ನ್ಯೂಸ್

ಪೆರ್ನೆ: ಅಯೋಧ್ಯ ಫ್ರೆಂಡ್ಸ್ ಪೆರ್ನೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ, ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ನಾಲ್ಕನೇ ವರ್ಷದ ಸಾರ್ವಜನಿಕ ಕ್ರೀಡಾಕೂಟವು ಅಕ್ಟೋಬರ್ 13 ರಂದು ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಕ್ರೀಡಾಂಗಣ ಪೆರ್ನೆಯಲ್ಲಿ ನಡೆಯಲಿದೆ.ಪುರ್ವಾಹ್ನ 9 ಗಂಟೆಗೆ ನಡೆಯುವ ಉದ್ಘಾಟನೆಯನ್ನು ವೇದಮೂರ್ತಿ ಪಂಡಿತ ಕೆ. ಕೃಷ್ಣಮೂರ್ತಿ ಕಾರಂತ ಮತ್ತು ಹಿರಿಯ ಪ್ರಗತಿಪರ ಕೃಷಿಕ ಗುರುವಪ್ಪ ಪೂಜಾರಿ ಕೆಳಗಿನ ಮನೆ ಇವರು ನೇರವೇರಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನೆಯ ನಂತರ ಪರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ. ಸಂಜೆ 6.30ಕ್ಕೆ ಸಮಾರೊಪ ಸಮಾರಂಭವು ನಡೆಯಲಿದ್ದು, ನಂತರ 7.30ಕ್ಕೆ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ. ರಾತ್ರಿ ಗಂಟೆ 8.30ಕ್ಕೆ ಲ| ಕಿಶೋರ್ ಡಿ. ಶೆಟ್ಟಿ ನಿರ್ದೇಶನದಲ್ಲಿ ಲಕುಮಿ ತಂಡದ ಕಲಾವಿದರಿಂದ ಗುಟ್ಟು ಗೊತ್ತಾಂಡ್ ಎಂಬ ತುಳು ಹಾಸ್ಯ ನಾಟಕ ಪ್ರದರ್ಶನ ಕಾಣಲಿದೆ.

ಜಾಹೀರಾತು