Friday, September 20, 2024
ಸುದ್ದಿ

ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಡೀಕಯ್ಯ ಪೆರ್‍ವೋಡಿ ನಿಧನ ; ಪುತ್ತೂರಿನ ಸಂಘಟನೆಯ ಬಲವರ್ಧನೆಗೆ ಶಕ್ತಿಯಾಗಿದ್ದ ನಾಯಕ – ಹಸಂತ್ತಡ್ಕ ಸಂತಾಪ – ಕಹಳೆ ನ್ಯೂಸ್

ಪುತ್ತೂರು: ವಿಶ್ವಹಿಂದೂ ಪರಿಷತ್ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ, ಪಡ್ನೂರು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಪಡ್ನೂರಿನ ಡೀಕಯ್ಯ ಪೆರ್‍ವೋಡಿ(58ವ) ಅವರು ಸೆ.28ರಂದು ಬೆಳಿಗ್ಗೆ ನಿಧನರಾಗಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಪಡ್ನೂರು ಪೆರ್‍ವೋಡಿ ಮನೆತನದ ದಿವಂಗತರಾದ ಮಾಯಿಲಪ್ಪ ಪೂಜಾರಿ ಮತ್ತು ಸೀತಮ್ಮ ದಂಪತಿ ಅವರ ಪುತ್ರ ಡೀಕಯ್ಯ ಪೆರ್‍ವೋಡಿ ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಸೆ.28ರಂದು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಗೆ ಸ್ಪಂಧಿಸದ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ಆಶಾ, ಪುತ್ರ ಶಿಶಿರ್, ಸಹೋದರ ಶ್ರೀನಿವಾಸ್ ಪೆರ್‍ವೋಡಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

ಜಾಹೀರಾತು

ಸಂಘಟನೆಯ ಬಲವರ್ಧನೆಗೆ ಡೀಕಯ್ಯರ ಪಾತ್ರ ಮಹತ್ವದ್ದು, ಅವರ ಈ ಸಂಘಟನೆಯ ಕಾರ್ಯವನ್ನು ಯಾವತ್ತು ನಾವು ಮರೆಯುವಂತ್ತಿಲ್ಲ‌, ಅವರ ಅಗಲುವಿಗೆ ನೋವು ತಂದಿದೆ, ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದು ಬಜರಂಗಳ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಸಂತಾಪ ಸೂಚಿಸಿದ್ದಾರೆ.