Saturday, September 21, 2024
ಸುದ್ದಿ

ಕೊನೆಗೂ ಹೊರಬಿದ್ದ ಬಿಗ್ ಬಾಸ್ ಫಲಿತಾಂಶ | ಪುತ್ತೂರು ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಈಗ ಬಿಗ್ ಬಾಸ್

ಬೆಂಗಳೂರು : ದೇಶದಲ್ಲಿಯೇ ಸಂಚಲನ ಮೂಡಿಸಿದ್ದ ಬಿಗ್ ಬಾಸ್ ನ ಕನ್ನಡ ಅವತರಣಿಕೆ ಬಿಗ್ ಬಾಸ್ ಕನ್ನಡ ಸೀಸನ್ 5 ಇದರ ವಿನ್ನರ್ ಯಾರು ಎಂಬುದು ಕೆಲವೇ ಕ್ಷಣಗಳ ಹಿಂದೆ ಹೊರಬಿದ್ದಿದ್ದು ಬಿಗ್ ಬಾಸ್ ವಿನ್ನರ್ ಯಾರು ಆಗಬಹುದು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮನೆ ಮನೆಗಳಲ್ಲಿ ಹೆಂಗಳೆಯರು ನಡೆಸುತ್ತಿದ್ದ ಚರ್ಚೆಗೆ ತೆರೆಬಿದ್ದಿದೆ.

ಘಟ್ಟ ತಲುಪಿದ್ದ ಕನ್ನಡ ಬಿಗ್ ಬಾಸ್ ಸೀಸನ್ 5 ನ ವಿನ್ನರ್ ಯಾರು ಅನ್ನೋದನ್ನು ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರು ಪ್ರಕಟಿಸಿದ್ದು. ಎಲ್ಲರ ನಿರೀಕ್ಷೆಯಂತೆ ಚಂದನ್ ಶೆಟ್ಟಿಯವರೇ ಬಿಗ್ ಬಾಸ್ ಗೆಲುವಿನ ಕಿರೀಟ ಧರಿಸಿದ್ದಾರೆಂದು ತಿಳಿದುಬಂದಿದೆ. ಚಂದನ್ ಶೆಟ್ಟಿಯವರು ಪುತ್ತೂರಿನ ಪ್ರತಿಷ್ಠಿತ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಗ್ ಬಾಸ್ ಫೈನಲ್ ನಲ್ಲಿದ್ದವರು.

ಜಾಹೀರಾತು

ಬಿಗ್ ಬಾಸ್ ಫೈನಲ್ ಗೆ ಚಂದನ್ ಶೆಟ್ಟಿ, ಜಯರಾಮ್ ಕಾರ್ತಿಕ್, ದಿವಾಕರ್, ನಿವೇದಿತಾ ಗೌಡ, ಶ್ರುತಿ ಪ್ರಕಾಶ್ ಬಂದಿದ್ದರು. ಇದರಲ್ಲಿ ನೆನ್ನೆ ಇಬ್ಬರು ಎಲಿಮಿನೆಟ್ ಆಗಿದ್ದರು! ಇನ್ನುಳಿದ ಮೂವರಲ್ಲಿ ಯಾರು ಬಿಗ್ ಬಿಗ್ ಬಾಸ್ ಕಿರೀಟ ಧರಿಸುತ್ತಾರೆ ಎಂಬುದೇ ಇಂದು ಸಾಯಾಂಕಾಲದವರೆಗೆ ಕಾಡುತ್ತಿದ್ದ ಯಕ್ಷಪ್ರಶ್ನೆಯಾಗಿತ್ತು.

ಫೈನಲ್ ಪ್ರವೇಶಿಸಿರೋ ಸ್ಪರ್ಧಿಗಳ ಬಗ್ಗೆ ಚಿಕ್ಕ ಪರಿಚಯ..

ಕೈಗೆ ಸಿಕ್ಕ ವಸ್ತುಗಳಿಂದ ಸಂಗೀತದ ಸುಧೆ ಹರಿಸೋ, ಮೂರೇ ಮೂರೂ ಪೆಗ್ಗಿಗೆ ತಲೆ ಗಿರ ಗಿರ ಅನ್ನುತ್ತಿದೆ, ಎನ್ನುತ್ತಲೇ ಬಿಗ್ ಬಾಸ್ ಪ್ರವೇಶ ಪಡೆದಿರೋ ಚಂದನ್ ಶೆಟ್ಟಿ, ಆಶ್ವಿನಿ ನಕ್ಷತ್ರ ಎಂಬ ಕನ್ನಡ ಧಾರವಾಹಿ ಮೂಲಕ ರಾಜ್ಯದ ಮಹಿಳಾಮಣಿ ಗಳ ಮನೆಗೆದ್ದು ಮನೆಮಾತಾಗಿರುವ ಜಯರಾಮ್ ಕಾರ್ತಿಕ್, ತನ್ನ ಮುದ್ದು ಮುದ್ದಾದ ಮುಖ ಹಾಗು ನಟನೆಯಿಂದ ಎಲ್ಲರ ಗಮನ ಸೆಳೆದಿರೋ ನಟಿ ಶ್ರುತಿ ಪ್ರಕಾಶ್, ಕಾಮನ್ ಮ್ಯಾನ್ ಎಂಬ ಬಿರುದಿನೊಂದಿಗೆ ಬಿಗ್ ಬಾಸ್ ಮನೆ ಪ್ರವೆಶೀಸಿರೋ ಸೇಲ್ಸ್ ಮ್ಯಾನ್ ದಿವಾಕರ್, ತನ್ನ ಪೆದ್ದು ಪೆದ್ದು ಮಾತುಗಳ ಮೂಲಕ ಹಾಗೂ ಡಬ್ ಸ್ಮ್ಯಾಶ್ ಮಾಡುವ ಮೂಲಕ ಬಿಗ್ ಬಾಸ್ ಪ್ರವೇಶಿಸಿರೋ ನಿವೇದಿತಾ ಗೌಡ ಅವರು ಬಿಗ್ ಬಾಸ್ ಫೈನಲ್ ನಲ್ಲಿದ್ದರು.

ಪ್ರತಿವಾರ ವೋಟ್ ಮಾಡುವ ಮೂಲಕ ತಮಗಿಷ್ಟವಾದ ಸ್ಪರ್ಧಿಗಳನ್ನು ಜನರು ಬಿಗ್ ಬಾಸ್ ಮನೆಯಲ್ಲಿ ಉಳಿಸುತ್ತಿದ್ದರು. ನೆನ್ನೆ ಫಿನಾಲೆಯಲ್ಲಿ ಶ್ರುತಿ ಪ್ರಕಾಶ್ ಹಾಗು ನಿವೇದಿತಾ ಗೌಡ ಅಂತಿಮ ಸುತ್ತಿನಲ್ಲಿ ಹೊರ ಬಿದ್ದಿದ್ದರು. ಬಿಗ್ ಬಾಸ್ ನ ಕೊನೆಯ ದಿನವಾದ ಇಂದು ಕನ್ನಡ ರ್ಯಾಪರ್ ಚಂದನ್ ಶೆಟ್ಟಿ, ಜಯರಾಮ್ ಕಾರ್ತಿಕ್ ಹಾಗೂ ದಿವಾಕರ್ ಬಿಗ್ ಬಾಸ್ ಮನೆಯಲ್ಲಿದ್ದರು. ಇವರಲ್ಲಿ ಚಂದನ್ ಶೆಟ್ಟಿಯವರು ಬಿಗ್ ಬಾಸ್ ಗೆದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ…

ವರದಿ : ಕಹಳೆ ನ್ಯೂಸ್

Leave a Response