Friday, September 20, 2024
ಸುದ್ದಿ

ಕಾಂಗ್ರೆಸ್ಸಿನ ಕಾರ್ಯಕರ್ತರು ಜೈಲಿಗೆ ಹೋದಾಗ ಎಷ್ಟು ಭಾರಿ ಪ್ರತಿಭಾ ಕುಲಾಯಿ ಬಂದಿದ್ರು | ರೈತರ ಸಾವಿಗೆ, ಆಮಾಯಕ ಮುಸ್ಲಿಂ ಯುವಕರ ಸಾವಿಗೆ ಕಾಂಗ್ರೆಸ್ ಕಾರಣವೇ? – ಇಬ್ರಾಹಿಂ ಗೋಳಿಕಟ್ಟೆ

ಮಂಗಳೂರು : ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಯವರು ಸಂಘ ಪರಿವಾರದ ಬಗ್ಗೆ ನೀಡಿದ ಹೇಳಿಕೆಯ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಜೆ.ಡಿ.ಎಸ್. ಜಂಟಿ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ಹೇಳಿಕೆಯನ್ನು ಖಂಡಿಸಿದ್ದಾರೆ.

ಯಾವುದೇ ಪಕ್ಷದ ಬಗ್ಗೆ ಮಾತನಾಡುವ ಮೊದಲು ಸ್ವಲ್ಪ ಸಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು, ಯುವಕರು ಸಾಯಬೇಕಾದರೇ ಸಂಘಪರಿವಾರ ಸೇರಿ ಎಂಬ ಅವರ ಹೇಳಿಕಯನ್ನೇ ತಿರುಗಿಸಿ ಅವರಿಗೆ ಕೇಳಿದರೆ ಹೇಗೆ? ರಾಜ್ಯದಲ್ಲಿನ ರೈತ ಸಾವಿಗೆ ಸಿದ್ದರಾಮಯ್ಯ ನವರೇ ಕಾರಣವೇ? ಅಮಾಯಕ ಮುಸ್ಲಿಂ ಯುವಕರ ಸಾವಿಗೆ ಕಾಂಗ್ರೆಸ್ ಕಾರಣವೇ? ಎಂದು ಕೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್ಸಿನ ಕಾರ್ಯಕರ್ತರು ಜೈಲು ಪಾಲಾದಾಗ ಎಷ್ಟು ಭಾರಿ ಪ್ರತಿಭಾ ಕುಳಾಯಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.

ಜಾಹೀರಾತು

ವರದಿ ಕಹಳೆ ನ್ಯೂಸ್