Friday, September 20, 2024
ಸುದ್ದಿ

‘ಶಾ’ ಬರೀ ಹಿಂದುಗಳ ಮನೆಗೆ ಯಾಕೆ ಹೋಗಬೇಕು, ಕರಾವಳಿಯ ಚರ್ಚ್ ಮತ್ತು ಮಸೀದಿಗೂ ಹೋಗಲಿ – ಗುಂಡೂರಾವ್

ಉಡುಪಿ, ಫೆ 17: ಕರಾವಳಿ ಪ್ರವಾಸದ ವೇಳೆ ಅಮಿತ್ ಶಾ ಬರೀ ಹಿಂದೂಗಳ ಮನೆಗೆ ಯಾಕೆ ಹೋಗಬೇಕು. ಚರ್ಚ್, ಮಸೀದಿಗೂ ಶಾ ಹೋಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಮಸೀದಿಗೂ ಭೇಟಿ ಕೊಡಲಿ. ಚರ್ಚ್, ದರ್ಗಾಕ್ಕೂ ಶಾ ಹೋಗಲಿ. ಬರೀ ಹಿಂದೂಗಳ ಮನೆಗೆ ಯಾಕೆ ಹೋಗಬೇಕು. ಮೃತ ಮುಸಲ್ಮಾನರ ಮನೆಗೂ ಶಾ ಹೋಗಲಿ. ಸತ್ತವರ ವಿಚಾರದಲ್ಲಿ ಜಾತಿ-ಧರ್ಮ ನೋಡಬೇಡಿ ಎಂದು ಕಿವಿಮಾತು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಸೂರು ಕಾರ್ಯಕ್ರಮಕ್ಕೆ ಸಿಎಂ ಅವರಿಗೆ ಆಹ್ವಾನ ನೀಡದೇ ಇರುವುದು ಮೋದಿಯವರ ಸಣ್ಣತನ. ಶಿಷ್ಟಾಚಾರ ಪಾಲಿಸುವುದು ಕೇಂದ್ರದ ಜವಾಬ್ದಾರಿ ಆಕ್ರೋಶ ವ್ಯಕ್ತಪಡಿಸಿದರು.

ಜಾಹೀರಾತು

ಅಮಿತ್ ಶಾ ಅವರು ಅನೇಕ ಬಾರಿ ರಾಜ್ಯಕ್ಕೆ ಬಂದಿದ್ದಾರೆ. ಶಾ ಮಾತು ಕೋಮು ಭಾವನೆ ಕೆರಳಿಸದಿರಲಿ. ಈ ಸಲ ಸತ್ಯ ಮಾತನಾಡಲಿ. ಜನರ ಮನಸ್ಸಲ್ಲಿ ವಿಷ ಬೀಜ ಬಿತ್ತಬೇಡಿ. ಅಮಿತ್ ಶಾ ಜವಾಬ್ದಾರಿಯುತವಾಗಿ ಮಾತನಾಡಲಿ. ನಮ್ಮ ಸರ್ಕಾರದ ಬಗ್ಗೆ ಸುಳ್ಳು ಆರೋಪ ಬೇಡ. ರಾಜ್ಯ-ದೇಶದ ಹಿತದೃಷ್ಟಿಯಿಂದ ಮಾತನಾಡಲಿ ಎಂದು ಹೇಳಿದರು.

ವರದಿ : ಕಹಳೆ ನ್ಯೂಸ್