Friday, September 20, 2024
ಸುದ್ದಿ

ಅಂದು ಹಾರೀಸ್ ಪುತ್ರನಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದ ಪ್ರಕಾಶ್ ರೈ ಇಂದು ಏನಂತರೆ ಗೊತ್ತಾ?

ಬೆಂಗಳೂರು : ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲಿ ಹಿಂದೊಮ್ಮೆ ಪ್ರಕಾಶ್ ರೈ ನಲಪಾಡ್’ನನ್ನು ಹೊಗಳಿರುವ ವಿಚಾರ ಮುನ್ನಲೆಗೆ ಬಂದಿದೆ.
ಬೆಂಗಳೂರಿನಲ್ಲಿ ಜನವರಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ನಲಪಾಡ್’ನನ್ನು ಪ್ರಕಾಶ್ ರೈ ಹೊಗಳಿದ್ದರು. ಮಗನನ್ನು ಹೇಗೆ ಬೆಳೆಸಿದ್ದಾರೆ ನೋಡಿ ಎಂದು ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡುತ್ತಾ ಶಹಬ್ಬಾಸ್ ಎಂದಿದ್ದರು.

ಪೋಡಿಯಂ ಬಳಿ ನಲಪಾಡ್ ಕರೆದು ಬೆನ್ನುತಟ್ಟಿ, ಬೆಳೆಸಿದರೆ ಹೀಗೆ ಬೆಳಸಬೇಕು ಮಕ್ಕಳನ್ನು ಎಂದು ಮೆಚ್ಚುಗೆ ಸೂಚಿಸಿದ್ದರು. ಪ್ರಕಾಶ್ ರಾಜ್ ಫೌಂಡೇಷನ್’ಗೆ ನೆರವಾಗಿದ್ದಕ್ಕೆ ಹಾಗೂ ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುವ ಕೆಲಸಕ್ಕೆ ಅಂದು ಸಹಾಯ ಮಾಡಿದ್ದ ಮೊಹಮ್ಮದ್ ನಲಪಾಡ್’ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅವತ್ತು ಹೊಗಳಿದ್ದು ನಿಜ. ಆದರೆ  ನನಗೆ ಇಂದು ನಿಜವಾಗಿಯೂ ಪಾಠ ಕಲಿತಂತಾಗಿದೆ. ಅಂದು ಆ ಹುಡುಗನಿಗೆ ರೆಕಾರ್ಡ್ ಇತ್ತು. ಆದರೆ ನಾನು ಅದನ್ನು ಗಮನದಲ್ಲಿಟ್ಟುಕೊಂಡಿರಲಿಲ್ಲ. ಅವನ ಸಹಾಯವನ್ನು ಗಮನದಲ್ಲಿಟ್ಟುಕೊಂಡು ಹೊಗಳಿದೆ. ಸಭ್ಯ ಸಮಾಜದಲ್ಲಿ ನಾಗರೀಕರು ಯಾರನ್ನಾದರೂ ಹೊಡೆದು, ತಮ್ಮ ಪವರ್ ತೋರಿಸುವುದನ್ನು ನಾವೆಲ್ಲಾ ಖಂಡಿಸಬೇಕು ಎಂದು ಕಹಳೆ ನ್ಯೂಸ್’ಗೆ ಪ್ರತಿಕ್ರಿಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು