Friday, September 20, 2024
ಸುದ್ದಿ

ಮೈಸೂರಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್​ ವಿರುದ್ಧ ಮೋದಿಯಿಂದ ತೀವ್ರ ವಾಗ್ದಾಳಿ!

ಮೈಸೂರು : ಇಂದು ಅರಮನೆ ನಗರಿಗೆ ಆಗಮಿಸಿರುವ ನರೇಂದ್ರ ಮೋದಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ತಮ್ಮ ಭಾಷಣದ ಉದ್ದಕ್ಕೂ  ಪ್ರಧಾನಿ ಮೋದಿ ಬಿಜೆಪಿಯನ್ನು ಬೆಂಬಲಿಸುವಂತೆ ಕರೆ ಕೊಟ್ಟಿದ್ದರಲ್ಲದೇ . 10% ಕಮಿಷನ್ ​ಸರ್ಕಾರ ವೆಂದು ಕಾಂಗ್ರೆಸ್​ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಅದಕ್ಕಿಂತಲೂ ಹೆಚ್ಚು ಕಮಿಷನ್​ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯನವರ ಸರ್ಕಾರವನ್ನು ನೇರವಾಗಿಯೇ ಛೇಡಿಸಿದರು.  ಅಲ್ಲದೇ  ರಾಜ್ಯದ ಅಭವೃದ್ಧಿ ಕಾರ್ಯಗಳಿಗೂ ಕಾಂಗ್ರೆಸ್​ನವರು ಅಡ್ಡಗಾಲು ಹಾಕುತ್ತಿದ್ದಾರೆ. ಕಾಂಗ್ರೆಸ್​ನವರು  ಹೋದ ಕಡೆಯಲೆಲ್ಲಾ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ.

ಬಿಜೆಪಿ ಸರ್ಕಾರದಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಾವು ಸಿದ್ಧರಾಗಿದ್ದೇವೆ. ಮೋದಿಯವರು ಭಾಷಣ ಮುಂದುವರೆಸಿ ಮಾತನಾಡಿ  ಕಮಿಷನ್​ ಸರ್ಕಾರವಲ್ಲ, ಮಿಷನ್​ ಸರ್ಕಾರ ನಮ್ಮದು. ದೇಶವನ್ನ ಮುನ್ನಡೆಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು. ಈ ಬಾರಿ ಬಿಜೆಪಿ ಗೆಲ್ಲಿಸಿ ಎಂದು ಕನ್ನಡದಲ್ಲಿ ಕರೆ ನೀಡಿ ಈ ಬಾರಿ ರಾಜ್ಯವನ್ನು ಕಾಂಗ್ರೆಸ್​ ಮುಕ್ತ ಸರ್ಕಾರವನ್ನಾಗಿ ಮಾಡಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್

ಜಾಹೀರಾತು