Friday, September 20, 2024
ಸುದ್ದಿ

ಕಟ್ಟತ್ತಾರು ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ವಿತರಣೆ ಮಾಡಿದ ಅಶೋಕ್ ಕುಮಾರ್ ರೈ

ಪುತ್ತೂರು : ತೆಂಕಿಲ ಕಟ್ಟತ್ತಾರು ಅಂಗನವಾಡಿ ಕೇಂದ್ರದ ಮಕ್ಕಳ ಕುಡಿಯುವ ನೀರಿನ ಟ್ಯಾಂಕ್ ಅಸಮರ್ಪಕತೆಯಿಂದ ಕೂಡಿದ್ದು,ಈ ಬಗ್ಗೆ ಉದ್ಯಮಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ

ಕೋಡಿಂಬಾಡಿಯವರ ನೇತ್ರತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಗೆ ಬಂದು ವಿಷಯ ತಿಳಿಸಿದಾಗ ಇದಕ್ಕೆ ಸ್ಪಂದಿಸಿದ ಅಶೋಕ್ ಕುಮಾರ್ ರೈಯವರು ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ಒದಗಿಸಿದ್ದಾರಲ್ಲದೆ ಅದನ್ನು ತನ್ನ ಸ್ವಂತ ಖರ್ಚಿನಲ್ಲಿ ಜೋಡಣೆ ಮಾಡಿಕೊಟ್ಟಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯೆ ಶ್ಯಾಮಲ,ಬಿಜೆಪಿ ಗ್ರಾಮಾಂತರ ರೈತ ಮೋರ್ಚಾದ ಸದಸ್ಯ ರಾಜೇಂದ್ರ ರೈ ಪುಣಚ,ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಪಾರ್ವತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಾಹೀರಾತು

ವರದಿ : ಕಹಳೆ ನ್ಯೂಸ್