Friday, September 20, 2024
ಸುದ್ದಿ

ಸುರತ್ಕಲ್ ಕಡಲ ಕಿನಾರೆಯಲ್ಲಿ ತಿಮಿಂಗಿಲದ ಮೃತದೇಹ ಪತ್ತೆ – ಕಹಳೆ ನ್ಯೂಸ್

ಮಂಗಳೂರು : ನಗರದ ಸುರತ್ಕಲ್ ದೊಡ್ಡ ಕೊಪ್ಲ ಕಡಲ ತೀರದಲ್ಲಿ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಪತ್ತೆಯಾಗಿದೆ.

ಕರಾವಳಿ ಸಮುದ್ರದ ಕಡಲ ತೀರದಲ್ಲಿ ದೊಡ್ಡ ಗಾತ್ರದ ತಿಮಿಂಗಿಲಗಳಿದ್ದರೂ ಜನರ ಕಣ್ಣಿಗೆ ಕಾಣ ಸಿಗುವುದು ಅಪರೂಪ. ಆದರೆ ಮುಂಜಾನೆ ವೇಳೆ ವಾಯುವಿಹಾರಕ್ಕೆ ಸಮುದ್ರದ ದಡಕ್ಕೆ ಹೋದ ಪ್ರವಾಸಿಗರಿಗೆ ಮೃತ ತಿಮಿಂಗಿಲ ಕಾಣಸಿಕ್ಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ತಿಮಿಂಗಿಲ ಮೃತಪಟ್ಟು ಕೆಲ ದಿನಗಳ ಬಳಿಕ ಸುರತ್ಕಲ್ ದೊಡ್ಡ ಕೊಪ್ಲ ಕಡಲ ದಡ ಸೇರಿದೆ. ತಿಮಿಂಗಿಲವನ್ನ ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಕಡಲ ತೀರಕ್ಕೆ ಬರುತ್ತಿದ್ದಾರೆ.

ಜಾಹೀರಾತು

ಮೃತದೇಹ ಕೊಳೆತು ನಾರುತ್ತಿದ್ದು ಮಹಾನಗರ ಪಾಲಿಕೆ ಮಣ್ಣು ಮಾಡಲಿದೆ. ಇದಾಗಿ ಒಂದು ತಿಂಗಳ ಬಳಿಕ ಪಣಂಬೂರು ಬೀಚ್ ಅಭಿವೃದ್ಧಿ ಮಂಡಳಿ ತಿಮಿಂಗಿಲದ ಅಸ್ಥಿಪಂಜರವನ್ನು ಹೊರ ತೆಗೆದು ವಸ್ತು ಸಂಗ್ರಹಾಲಯಕ್ಕೆ ನೀಡಲು ತೀರ್ಮಾನಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಾಹೀರಾತು

ತಿಮಿಂಗಿಲದ ಮೃತದೇಹ ದಂಡೆಯ ಮೇಲಿರುವ ವಿಡಿಯೋ ಕಹಳೆ ನ್ಯೂಸ್ ನಲ್ಲಿ ಲಭ್ಯ – ಶೇರ್ ಮಾಡಿ ಸಬ್ಸ್ಕರ್ಬ್ ( Subscribe) ಮಾಡಿ.

https://youtu.be/TNOHVb0MxCE

ವರದಿ : ಕಹಳೆ ನ್ಯೂಸ್