Friday, September 20, 2024
ಸುದ್ದಿ

ಅಂದು ಶೀಲ ಕಾಪಾಡಲು ಸೌಮ್ಯ ಭಟ್ ಪ್ರಾಣ ತೆತ್ತರೆ ಇಂದು ಅಕ್ಷತಾ ಪ್ರಾಣತ್ಯಾಗ ಮಾಡಿದ್ದಾರೆ | ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು – ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು : ಅಂದು ತನ್ನ ಶೀಲ ಕಾಪಾಡಲು ಸೌಮ್ಯ ಭಟ್ ಅವರು ತಮ್ಮ ಪ್ರಾಣತ್ಯಾಗವನ್ನು ಮಾಡಿದ್ದರು, ಅಂತೆಯೇ ಇಂದು ಇಂದು ಅಕ್ಷತಾ ಅವರು ತಮ್ಮ ಮಾನವನ್ನು ಕಾಪಾಡಲು ಪ್ರಾಣ ತೆತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು  ತಮ್ಮ ಮನದ ನೋವನ್ನು ತೋಡಿಕೊಂಡರು.

ಮೃತ ಅಕ್ಷತಾ ಅವರ ಸ್ವಗ್ರಹಕ್ಕೆ ಭೇಟಿ ನೀಡಿದ ವೇಳೆ ಅವರ ಕುಟುಂಬಕ್ಕೆ 25 ಸಾವಿರ ರೂ ಗಳ ಚೆಕ್ ಅನ್ನು ಹಸ್ತಾನ್ತರಿಸುತ್ತಾ  ಬೇರೆ ಧರ್ಮೀಯರಿಂದ ಆಕ್ರಮಣಕ್ಕೆ ಒಳಗಾದ ಕುಟುಂಬಕ್ಕೆ ಮಾತ್ರ ಸಹಾಯ ಮಾಡದೆ ಎಲ್ಲಾ ಬಡ ಹಿಂದೂ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ತಿಳಿಸಿ ಕುಟುಂಬಕ್ಕೆ ಸಂತ್ವಾನ ಹೇಳಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ ಮೃತರ ಕುಟುಂಬ ಬಡತನದಿಂದ ಕೂಡಿದ್ದು ಅವರ ಖಾತೆಯ ವಿವರವನ್ನು ಪಡೆದ ಕಿಶೋರ್ ಅವರು  ಹಿಂದೂ ಸಮಾಜ ಈ ಬಡ ಕುಟುಂಬಕ್ಕೆ  ಸಹಾಯವನ್ನು ಮಾಡಿ ಇವರ ಕುಟುಂಬಕ್ಕೆ ಆಸರೆಯಾಗಬೇಕು ಎಂದು ವಿನಂತಿ ಮಾಡಿದ್ದಾರೆ.

ಜಾಹೀರಾತು

ಅಲ್ಲದೆ , ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.


 ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಿಕಾ ಸಮಿತಿಯ ಸುಳ್ಯ ಘಟಕದ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ನಾಗರಾಜ ಭಟ್ , ಮುಳ್ಳೆರಿಯಾ ಹವ್ಯಕ ಮಂಡಲದ ಕಾರ್ಯದರ್ಶಿ ಪೈಸಾರಿ ಭಟ್ ಅವರು, ಪುತ್ತೂರು ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಆರ್ ಗೌರಿ , ವಿಧ್ಯಾಶ್ರೀ ಶಾಲೆಯ ಅಧ್ಯಕ್ಷ ಶ್ರೀ ಗಣೇಶ್, ಕಹಳೆ ನ್ಯೂಸ್ ಮುಖ್ಯಸ್ತ ಶ್ಯಾಮ ಸುದರ್ಶನ , ಪ್ರವೀಣ್ ಕಾಟುಕುಕ್ಕೆ ಮತ್ತು ಸುಳ್ಯ ತಾಲೂಕು ಪಂಚಾಯಿತಿ ಮತ್ತು ನಗರ ಪಂಚಾಯಿತಿ ಸದಸ್ಯರು , ಮುಳ್ಳೆರಿಯಾ ಹವ್ಯಕ ಘಟಕದ ಸದಸ್ಯರು ಉಪಸ್ಥಿತರಿದ್ದರು.

 

 

ವರದಿ : ಕಹಳೆ ನ್ಯೂಸ್